ಸೋಮವಾರ, ಏಪ್ರಿಲ್ 16, 2012

<<<**"ನನ್ನ ಕವನ"**>>>

ಈ ಪಾಪಿ ಮನದ ಪಾಪ ತೊಳೆಯೋಳು,
ನನ್ನ ಮನದರಸಿ ಶಾಪ ಹಿಡಿದ ಕನಸಲ್ ಬರುವವಳು..

ಕಡುಗಪ್ಪು ತುಂಬಿದ ನನ್ನ ಬಾಳಲ್ಲಿ,
ದೀವಟಿಗೆಯ ಹಿಡಿದು ಬೆಳಕ ಚೆಲ್ಲಿದವಳು..

ಹೇಗೆ ಹೊಗಳಲಿ ಅವಳ ಅಂದ-ಚೆಂದವಾ.?
ಅವಳೆದುರು ನಾ ಹೇಗೆ ಹೇಳಲಿ ನನ್ನೀ ಒಲವಾ.?

ಅವಳೋಬ್ಬ ಶ್ರೀಮಂತ ಮನೆಯ ಸಿರಿ,
ನಾನು ಬಡವರ ಮನೆಯ ಭಿಕಾರಿ..

ಆದರೆ ಪ್ರೀತಿಗಿಲ್ಲ ಈ ಬಡತನ ಸಿರಿತನ,
ಅದಕ್ಕಾಗಿ ಶುರು ಮಾಡಿದೆ ಅವಳೊಡನೆ ಗೆಳೆತನ..

ಆದರದನ್ನು ಒಪ್ಪಲಿಲ್ಲ ನಮ್ಮಿಬ್ಬರ ಮನೆತನ,
ಸುಳ್ಳು ಕಥೆಯ ಹೇಳಿ ಬೆಳೆಸಿದರು ನಮ್ಮ ನಡುವೆ ಹಗೆತನ..

ನಂತರ ಅವಳ ಮರೆಯಲು ಬಹಳ ದುಃಖಿಸಿತ್ತು ನನ್ನೀ ಮನ,
ಮತ್ತೆ ಎಂದೆಂದೂ ಆಗಲೇ ಇಲ್ಲ ನನ್ನ ಬಾಳಲ್ಲಿ ಅವಳಾಗಮನ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ