ಮಂಗಳವಾರ, ನವೆಂಬರ್ 19, 2013

ಅಪರಿಚಿತ ದಾರಿಯಲ್ಲಿ ನನ್ನವಳನ್ನು ಹುಡುಕುತ್ತಾ ಹೊರಟೆ ಅವಳು ಬಿಟ್ಟುಹೋದ ಗುರುತನ್ನು ಹಿಡಿದು... ಅಯಾಸ ತೀರಿಸಲು ಅವಳ ನೆನಪುಗಳ ತಂಗುದಾಣವಿತ್ತು ಹಸಿವು ನೀಗಲು ಅವಳ ಮುಗುಳ್ನಗುವೇ ಆಧಾರವಾಗಿತ್ತು... ಅವಳ ಮುನಿಸು ದಾರಿಯಲ್ಲಿ ಅಡ್ಡಿಯಾದರೂ ಅವಳು ತೋರಿದ್ದ ಒಲವಿನ ದೀವಿಗೆ ಪಯಣವನ್ನು ಸುಗಮವಾಗಿಸಿತ್ತು.. ಮುಂದೆ ನನಗೆ ಹತಾಷೆ ಕಾದಿತ್ತು ತಲುಪುವ ಗಮ್ಯ ಬಹಳ ದೂರವಿತ್ತು ನಗುವಿನ ಬುತ್ತಿಯೂ ಖಾಲಿಯಾಗುತ್ತಿತ್ತು ನೆನಪಿನ ತಂಗುದಾಣವೂ ಎಲ್ಲೂ ಕಾಣದಂತಾಗಿತ್ತು... ಕೊನೆಗೂ ನಾನು ಸೋಲಲಿಲ್ಲ ಮನದಲ್ಲಿ ಚಿಗುರಿದ ಆಸೆಯ ಕುಡಿ ಬಾಡಲಿಲ್ಲ ದೂರದಲ್ಲಿ ಅವಳನ್ನು ಕಂಡಂತೆ ಭಾಸವಾಯಿತು ನನಗಾದ ಖುಷಿಗೆ ಮನವು ಕುಣಿಯುತ್ತಿತು.... ನನ್ನನ್ನು ನೋಡಿ ಆಕೆ ಅಚ್ಚರಿಗೊಂಡಳು ನನ್ನೆಡೆಗೆ ಓಡಿಬಂದು ನನ್ನನಪ್ಪಿ ಕಣ್ಣೀರಿಟ್ಟಳು ತಾನು ಮಾಡಿದ ತಪ್ಪಿಗೆ ತನ್ನನ್ನೇ ಬೈದುಕೊಂಡಳು ತಪ್ಪಿಗೆ ಪ್ರಾಯಶ್ಚಿತವಾಗಿ ನನ್ನೊಡನೆ ಬರಲೊಪ್ಪಿಕೊಂಡಳು... ಪರಿಚಿತವಾದ ದಾರಿಯಲ್ಲಿ ನನ್ನವಳ ಕೈ ಹಿಡಿದು ಹೊಸ ಹೊಸ ಆಸೆಗಳೊಂದಿಗೆ ಹೊಸ ಹುರುಪಿನಲಿ ಹರುಷದಿಂದ ಹೊರಟಿರುವೆ ಹೊಸ ಗುರಿಯೆಡೆಗೆ...

ಭಾನುವಾರ, ಆಗಸ್ಟ್ 25, 2013

1) ಕೈಯಲ್ಲಿತ್ತು ಅಂದು ಒಡೆದ ಕನಸಿನ ಕನ್ನಡಿಯ ಒಂದು ಚೂರು.. ನನ್ನಿಂದ ದೂರಾಗಿ ನೀ ಸೇರಿದಾಗ ಕಣ್ಣಿಗೆ ಕಾಣದ ದೂರದೂರು... 2) ನಿನ್ನೆಯಿಂದ ನನ್ನ ಬಾಳಿನಲ್ಲಿ ನನ್ನ ಪ್ರೀತಿಯ ಸತ್ತ ಸೂತಕ... ಮರೆಯಲಾಗದ ನಿನ್ನ ನೆನಪಲಿ ಮುಳುಗಿ ಮನಸ್ಸಾಗಿದೆ ಇಂದು ಭಾವುಕ...'' 3) ನನ್ನ ಈ ಮನದ ಆಗಸದಲ್ಲಿ,, ನಿನ್ನ ಕಹಿ ನೆನಪಿನ ಕಾರ್ಮುಗಿಲು ಕವಿದು.. ಖುಷಿಯ ಕಾಮನಬಿಲ್ಲು ಕಾಣೆಯಾಗಿ,, ಕಣ್ಣೀರ ಮಳೆಯು ಸುರಿಯುತಿಹುದೆಂದ ಪ್ರದೀಪ.... 4) ಆ ದಿನ ಯಾಕೆ ನೀನಾದೆ ನನ್ನಿಂದ 'ಅಗೋಚರ', ಅಂದಿನಿಂದ ನನ್ನ ಮನಸಾಗಿದೆ 'ನಿಶಾಚರ', ಏನೋ ಗೊತ್ತಿಲ್ಲಾ ಕಂಡಿದ್ದೆಲ್ಲಾ ಅನಿಸುತಿದೆ 'ಅಬ್ರಕದಬ್ರ', ನನ್ನಾಣೆಗೂ ನಿನ್ನ ಪ್ರೀತಿಸುವೆ 'ಇದು ಸತ್ಯ' ನನ್ನ ಪ್ರೀತಿಯನ್ನು ಕೆಣಕಲು ಯಾರಾದರೂ ಕೇಳಿದರೆ 'ಹೀಗೂ ಉಂಟೇ'..? 'ಕ್ರೈಂಡೈರಿ'ಯಲ್ಲಿ ಅವರ ಕಥಾಯಾಗುತ್ತದೆ 'ಕ್ರೈಂಸ್ಟೋರಿ' ಹಾಗಂತಾ ನಮ್ಮ ಪ್ರೀತಿನಾ 'ಗಲ್ಲಿ ಗಾಸಿಪ್' ಥರ 'ನೀವು ಹೇಳಿದ್ದು ನಾವು ಕೇಳಿದ್ದು' ಅಂತ 'ಸಿಂಗ್ರಿ ರೌಂಡ್ಸ್' ಗೆ ಬಂದಾಗ ಹೇಳಬಾರದು, ಇದು ನನ್ನ 'ಕಟ್ಟೆಚ್ಚರ'...... ಆದ್ರೂ ಗೆಳೆಯರೇ ಈ ಪ್ರೀತಿ ಅನ್ನೋದು 'ಜೇಡರ ಬಲೆ' ಅಂದ್ಕೊಂಡಿದ್ದೆ ಆದ್ರೆ ಇದು 'ಚಕ್ರವ್ಯೂಹ' ಅಂತ ಇವತ್ತೇ ಗೊತ್ತಾಗಿದ್ದು....!!!!!! 5) ದಯವಿಟ್ಟು ಸಾಕು ಮಾಡು ಈ ನಿನ್ನ-ನನ್ನ ಪ್ರಶ್ನೋತ್ತರ... ನಿನ್ನ ಮುಗ್ಧ ಪ್ರಶ್ನೆಗೆ ನಾನಾಗಿರುವೆ ಈಗ ನಿರುತ್ತರ... ನಿನ್ನೀ ಅತಿಯಾದ ಪ್ರೀತಿ, ಕಾಡುತಿದೆ ನನ್ನ ನಿರಂತರ... ಆದರೆ ನಮ್ಮಿಬ್ಬರ ನಡುವೆ ಬಂದು ಒಂದು ಮಧ್ಯಂತರ.., ನಿನ್ನ ಕಳೆದುಕೊಳ್ಳುವ ಭಯದಲ್ಲಿ ನನ್ನ ಮನಸಾಗಿದೆ ತತ್ತರ... 6) ...ಮನಸ್ಸೆಂಬ ಮರುಭೂಮಿಯಲ್ಲಿ ನೀರಿನಂತೆ ಚಿಮ್ಮಿದವಳು ನೀನು... ...ಸುಡುವ ಬಿರುಬಿಸಿಲಲ್ಲೂ ತಂಪಾದ ತಂಗಾಳಿಯಾದವಳು ನೀನು... ...ರಾಗವನ್ನೇ ಮರೆತಿದ್ದ ನನ್ನ ಜೀವನಕ್ಕೆ ನವಪಲ್ಲವಿಯಾದವಳು ನೀನು... ...ಮಂಕಾಗಿದ್ದ ನನ್ನ ಕಲ್ಪನೆಗಳಿಗೆ ಹೊಳಪು ತಂದವಳು ನೀನು... ...ಈ ಕವನದಲ್ಲಿ ಮೂಡಿದ ಪದಗಳಿಗೆ ಸ್ಪೂರ್ತಿಯಾದವಳು ನೀನು...

ಸೋಮವಾರ, ಜುಲೈ 22, 2013

ಚೆಲುವೆ

...ಚೆಲುವೆ... ಈ ನನ್ನೆದೆಯಲ್ಲೊಂದು ಪುಟ್ಟ ಗೂಡು.. ನಿನಗಾಗಿ ಕಟ್ಟಿರುವೆ ಒಮ್ಮೆ ನೋಡು.. ನಿನ್ನ ನೋಟವೇ ಸ್ಪೂರ್ತಿಯಾದ ಈ ಗೂಡಿಗೆ, ನಿನ್ನ ನೆನಪುಗಳೇ ಇದರ ಅಡಿಪಾಯ.. ನನ್ನುಸಿರಿನಿಂದ ಕಟ್ಟಿದ ಗೋಡೆಗೆ, ನಾನಿರುವವರೆಗೂ ಇಲ್ಲಾ ಯಾವುದೇ ಅಪಾಯ.. ನಿನ್ನ ಕಂಗಳ ಕಾಡಿಗೆಯಾಗಿದೆ ಇದಕೆ ದೃಷ್ಟಿಬೊಟ್ಟು.. ಒಳಗೊಮ್ಮೆಯಾದರೂ ಆಗಮಿಸು ಕನಸಲಿ ಕಾಡುವುದನ್ನು ಬಿಟ್ಟು.. ನೀ ಬರಬಹುದೆಂಬ ಖುಷಿಗೆ ಸುರಿದ ಕಣ್ಣೀರಿಂದಲೇ ನನ್ನೆದೆ ಹಾದಿಯ ತೊಳೆದಿರುವೆ.. ಎಂದಿಗಾದರೂ ಒಮ್ಮೆ ನೀ ಬರುವೆಯೆಂದು ಕಾತುರದಿಂದ ಕಾಯುತಿರುವೆ.....
...ಚೆಲುವೆ... ಈ ನನ್ನೆದೆಯಲ್ಲೊಂದು ಪುಟ್ಟ ಗೂಡು.. ನಿನಗಾಗಿ ಕಟ್ಟಿರುವೆ ಒಮ್ಮೆ ನೋಡು.. ನಿನ್ನ ನೋಟವೇ ಸ್ಪೂರ್ತಿಯಾದ ಈ ಗೂಡಿಗೆ, ನಿನ್ನ ನೆನಪುಗಳೇ ಇದರ ಅಡಿಪಾಯ.. ನನ್ನುಸಿರಿನಿಂದ ಕಟ್ಟಿದ ಗೋಡೆಗೆ, ನಾನಿರುವವರೆಗೂ ಇಲ್ಲಾ ಯಾವುದೇ ಅಪಾಯ.. ನಿನ್ನ ಕಂಗಳ ಕಾಡಿಗೆಯಾಗಿದೆ ಇದಕೆ ದೃಷ್ಟಿಬೊಟ್ಟು.. ಒಳಗೊಮ್ಮೆಯಾದರೂ ಆಗಮಿಸು ಕನಸಲಿ ಕಾಡುವುದನ್ನು ಬಿಟ್ಟು.. ನೀ ಬರಬಹುದೆಂಬ ಖುಷಿಗೆ ಸುರಿದ ಕಣ್ಣೀರಿಂದಲೇ ನನ್ನೆದೆ ಹಾದಿಯ ತೊಳೆದಿರುವೆ.. ಎಂದಿಗಾದರೂ ಒಮ್ಮೆ ನೀ ಬರುವೆಯೆಂದು ಕಾತುರದಿಂದ ಕಾಯುತಿರುವೆ.....

ಶನಿವಾರ, ಜುಲೈ 20, 2013

ಚೆಲುವೆ...

ಚೆಲುವೆ...

ನನ್ನ ಕಣ್ಣೆದುರಿಗೆ ನೀ ಬಂದು
ನಿನ್ನ ಕಣ್ಣಲ್ಲೇ ನನ್ನ ಕದ್ದು
ಪಾಳುಬಿದ್ದ ಮನದೊಳಗೆ ನೆಲೆನಿಂತು
ಎಂದೂ ಕಾಣದ ಸಂತಸವ ತಂದವಳು ನೀನು...

ಈ ಮೊಂಡ ಗಮಾರನ ಸಹಿಸಿ
ಪ್ರೀತಿಪ್ರೇಮದ ಪಾಠ ಕಲಿಸಿ
ನನ್ನ ಮನವು ಅಳುಕಿದಾಗ
ಮಮತೆಯಿಂದ ಸಂತೈಸಿದವಳು ನೀನು...

ಬದುಕಿನ ದಾರಿಯ ಬೆಳಕಾಗಿ
ನನ್ನ ಉಸಿರಿನ ಹಸಿರಾಗಿ
ನಾ ಕಾಣುವ ಕಲ್ಪನೆಗೆ ಪದವಾಗಿ
ನನ್ನ ಸ್ವಪ್ನಲೋಕದ ರಾಣಿಯಾದವಳು ನೀನು...

ಬುಧವಾರ, ನವೆಂಬರ್ 28, 2012

"ಹೀಗೇಕೆ ಈ ಜೀವನ" ಹೀಗೇಕೆ ಈ ನನ್ನ ಜೀವನ.. ಪೂರ್ತಿ ಬರೆಯಲಾಗದ ಅಪೂರ್ಣ ಕವನ.. ಕಣ್ಣೊಳಗೆ ನನಸಾಗದ ಕನಸುಗಳು ತುಂಬಿವೆ. ಮನದೊಳಗೆ ಈಡೇರದ ಆಸೆಗಳೂ ಹಳಸಿವೆ.. ನಾನಂದುಕೊಂಡಂತೆ ಏನೂ ನೆಡೆಯಲಿಲ್ಲ. ಆತನ ಲಿಖಿತದಂತೆಯೂ ಯಾಕೋ ಘಟಿಸಲಿಲ್ಲ.. ಕೈ ಹಿಡಿವ ಮನದನ್ನೆ ಪರನೊಡನೆ ಹೋದಳು. ಲೆಖ್ಖಿಸದೇ ಈ ಪ್ರೇಮಿಯ ಮನದಾಳದ ಅಳಲು.. ಈ ಪಾಪಿಯ ಹೆತ್ತವರು ದರಿದ್ರವೆಂದು ಜರಿದರೆನ್ನನು. ಒಡಹುಟ್ಟಿದವರು ಶತ್ರುವಾಗಿಸಿದರೆನ್ನನು.. ಹೀಗೇಕೆ ಈ ನನ್ನ ಜೀವನ.. ನಾ ತಿಳಿಯದಾದೆ ಅದಕೆ ಕಾರಣ..

"ಹೀಗೇಕೆ ಈ ಜೀವನ" ಹೀಗೇಕೆ ಈ ನನ್ನ ಜೀವನ.. ಪೂರ್ತಿ ಬರೆಯಲಾಗದ ಅಪೂರ್ಣ ಕವನ.. ಕಣ್ಣೊಳಗೆ ನನಸಾಗದ ಕನಸುಗಳು ತುಂಬಿವೆ. ಮನದೊಳಗೆ ಈಡೇರದ ಆಸೆಗಳೂ ಹಳಸಿವೆ.. ನಾನಂದುಕೊಂಡಂತೆ ಏನೂ ನೆಡೆಯಲಿಲ್ಲ. ಆತನ ಲಿಖಿತದಂತೆಯೂ ಯಾಕೋ ಘಟಿಸಲಿಲ್ಲ.. ಕೈ ಹಿಡಿವ ಮನದನ್ನೆ ಪರನೊಡನೆ ಹೋದಳು. ಲೆಖ್ಖಿಸದೇ ಈ ಪ್ರೇಮಿಯ ಮನದಾಳದ ಅಳಲು.. ಈ ಪಾಪಿಯ ಹೆತ್ತವರು ದರಿದ್ರವೆಂದು ಜರಿದರೆನ್ನನು. ಒಡಹುಟ್ಟಿದವರು ಶತ್ರುವಾಗಿಸಿದರೆನ್ನನು.. ಹೀಗೇಕೆ ಈ ನನ್ನ ಜೀವನ.. ನಾ ತಿಳಿಯದಾದೆ ಅದಕೆ ಕಾರಣ..

ಬುಧವಾರ, ಆಗಸ್ಟ್ 22, 2012

ಯಾರವಳು..??!!

ಕರಗಳಿಗೆಟುಕದ ಅಂಬರದ ತಾರೆ ಅವಳು..

ಕಣ್ಣಿಗೆ ಕಾಣದ ಸುಂದರ ಮಾಯೆ ಅವಳು..

ಮಾತಲಿ ಬಣ್ಣಿಸಲಾಗದ ಚೆಲುವೆ ಅವಳು..

ಯಾರೂ ದ್ವೇಷಿಸಲಾಗದ ಮುಗ್ಧೆ ಅವಳು..

ಮನಸಲಿ ಪೂಜಿಸುವ ದೇವತೆ ಅವಳು..

ಕನಸನೇ ಕದಿಯುವ ತುಂಟ ಕಳ್ಳಿ ಅವಳು..

ನನ್ನುಸಿರಲಿ ಆವರಿಸಿರುವ ಮಿಂಚು ಅವಳು..

ಕಾರಣ ಇಲ್ಲದೇ ಮೂಡಿದ ಪ್ರೀತಿ ಅವಳು..

ಕವಿಯಾಗುವವರಿಗೆ ಸ್ಪೂರ್ತಿಯ ಚಿಲುಮೆ ಅವಳು..

ಎದೆಯಲ್ಲೂ ಎದುರಲ್ಲೂ ಎಲ್ಲೆಲ್ಲೂ ಕಾಡುವವಳು..

ಯಾರವಳು ಯಾರವಳೂ ಯಾರೋ ಅವಳು..

ಸೋಮವಾರ, ಆಗಸ್ಟ್ 20, 2012

***ನನ್ನವಳು***

ಮನಸಲಿ ನಲಿದಾಡಿ..
ಕನಸಲಿ ಕುಣಿದಾಡಿ..
ನನ್ನ ಮೈಮನ ಮರೆಸಿದ ಹೆಣ್ಣು ನೀನು..

ಕೈ ಹಿಡಿದು ಮುದ್ದಾಡಿ..
ಮಡಿಲಲ್ಲಿ ಮಗುವಾಗಿ..
ನಿನ್ನ ಪ್ರೀತಿಯ ಪಸರಿಸಿದ ಹೆಣ್ಣು ನೀನು..

ಬಾಳೆಲ್ಲಾ ಜೊತೆಯಾಗಿ..
ಸಾವಲ್ಲೂ ಸತಿಯಾಗಿ..
ಸಹಬಾಳ್ವೆ ನೆಡೆಸಲು ಬಂದ ಹೆಣ್ಣು ನೀನು..

ಮತ್ತೇಕೆ ಹೀಗೇಕೆ..
ನಡುವಲ್ಲೇ ಕೈಬಿಟ್ಟು..
ನನ್ನಿಂದ ದೂರಾದೆ ನೀನು..

ಗೊತ್ತಿಲ್ಲದ ರುಜಿನವ..
ಸಂತಸದಿ ಸ್ವೀಕರಿಸಿ..
ನನಗೆ ಹೇಳದೇ ವಂಚಿಸಿದ್ದೇಕೆ ನೀನು..

ನೋವಲ್ಲೂ ನಲಿಯುತಾ,,
ನನ್ನನ್ನೂ ನಗಿಸುತಾ..
ಕೊನೆಯಲ್ಲೇಕೆ ನನ್ನ ರೋಧಿಸುವಂತೆ ಮಾಡಿದೆ ನೀನು..

ಎಲ್ಲೇ ಇರು ಹೇಗೆ ಇರು..
ಏಳೇಳು ಜನ್ಮದಲೂ ನಾ ನಿನ್ನವ,,
ಈ ಮಾತನು ಎಂದೂ ಮರೆಯದಿರು ನೀನು..

ಬುಧವಾರ, ಜೂನ್ 20, 2012

????**ಹುಡುಕಾಟ????**

                               


ಹುಟ್ಟಿದ ನವಜಾತ ಮಗುವಿಗೆ ಅಮ್ಮನ ಎದೆಹಾಲಿನ ಹುಡುಕಾಟ..
ಚಿಕ್ಕ-ಚಿಕ್ಕ ತುಂಟ ಮಕ್ಕಳಿಗೆ ಸಿಹಿತಿನಿಸುಗಳ ಹುಡುಕಾಟ..
ಶಾಲೆಗೆ ಹೋಗುವ ಮಕ್ಕಳಿಗೆ ಶಾಲೆಗೆ ಹೋಗದೇ ಅಡಗಿಕೊಳ್ಳುವ ಜಾಗದ ಹುಡುಕಾಟ..
ಸ್ವಲ್ಪ ದೊಡ್ಡವರಾದ ಮೇಲೆ ಹೊಸ ಹೊಸ ಕನಸುಗಳ ಹುಡುಕಾಟ..
ಕಾಲೇಜಿಗೆ ಹೋದಾಗ ಶಿಕ್ಷಕರ ಬದಲು ಹೊಸ ಗೆಳೆಯರ ಹುಡುಕಾಟ..
ಪರಿಕ್ಷೆಯ ಸಮಯದಲ್ಲಿ ಓದದೇ ಇದ್ದರೆ ಬೇರೆಯವರು ಬರೆದ ಉತ್ತರಕ್ಕಾಗಿ ಹುಡುಕಾಟ..
ಅರ್ಧಮರ್ಧ ಕಲಿತು ಇಷ್ಟವಿಲ್ಲದ ಮಾಡಲೇಬೇಕಾದ ಕೆಲಸದ ಹುಡುಕಾಟ..
ಇದರ ನಡುವೆ ಕಣ್ಣಿಗೆ ಒಮ್ಮೆ ಕಾಣಿಸಿ ಮನಸಿಗೆ ಕಾಡುವ ಹುಡುಗಿಯ ಹುಡುಕಾಟ..
ಆ ಹುಡುಗಿ ಸಿಕ್ಕರೆ, ಅವಳ ಖುಷಿಗೋಸ್ಕರ ಕೈಯಲ್ಲಿರದ ಕಾಸಿಗಾಗಿ ಹುಡುಕಾಟ..
ಮನೆಯಲ್ಲಿ ಏನಾದರೂ ತೊಂದರೆಯಾದರೆ, ಅದರ ಪರಿಹಾರಕ್ಕಾಗಿ ಹುಡುಕಾಟ..
ಅಪ್ಪಅಮ್ಮನ ಮುಂದೆ ಪ್ರೀತಿಯ ವಿಷ್ಯ ಹೇಳುವಾಗ ಹಲವಾರು ಸುಳ್ಳುಗಳ ಹುಡುಕಾಟ..
ಅಂತು ಇಂತು ಮದುವೆಯಾದಾಗ ಮುಂದಿನ ಜೀವನ ಹೇಗೆ ಎಂಬ ಪ್ರಶ್ನೆಗೆ ಸಮಾಧಾನದ ಹುಡುಕಾಟ..
ಅದನ್ನು ಹುಡುಕುವಷ್ಟರಲ್ಲಿ ಆಯಸ್ಸು ಕಳೆದಾಗ ನಾವು ಮಾಡಿದ್ದೇನೇಂಬುದರ ಹುಡುಕಾಟ..
ಸಾಯುವ ಕಾಲದಲ್ಲಿ ಇಷ್ಟುದಿನ ಯಾರಿಗೂ ಕಾಣಿಸದ ಮೋಕ್ಷಕ್ಕಾಗಿ ಹುಡುಕಾಟ..
ಒಟ್ಟಿನಲ್ಲಿ ಜೀವನ ಪೂರ್ತಿ ಬರೀ ಹುಡುಕಾಟವೇ ಹುಡುಕಾಟ..!!!!

ಸೋಮವಾರ, ಏಪ್ರಿಲ್ 16, 2012

<<<**"ನನ್ನ ಕವನ"**>>>

ಈ ಪಾಪಿ ಮನದ ಪಾಪ ತೊಳೆಯೋಳು,
ನನ್ನ ಮನದರಸಿ ಶಾಪ ಹಿಡಿದ ಕನಸಲ್ ಬರುವವಳು..

ಕಡುಗಪ್ಪು ತುಂಬಿದ ನನ್ನ ಬಾಳಲ್ಲಿ,
ದೀವಟಿಗೆಯ ಹಿಡಿದು ಬೆಳಕ ಚೆಲ್ಲಿದವಳು..

ಹೇಗೆ ಹೊಗಳಲಿ ಅವಳ ಅಂದ-ಚೆಂದವಾ.?
ಅವಳೆದುರು ನಾ ಹೇಗೆ ಹೇಳಲಿ ನನ್ನೀ ಒಲವಾ.?

ಅವಳೋಬ್ಬ ಶ್ರೀಮಂತ ಮನೆಯ ಸಿರಿ,
ನಾನು ಬಡವರ ಮನೆಯ ಭಿಕಾರಿ..

ಆದರೆ ಪ್ರೀತಿಗಿಲ್ಲ ಈ ಬಡತನ ಸಿರಿತನ,
ಅದಕ್ಕಾಗಿ ಶುರು ಮಾಡಿದೆ ಅವಳೊಡನೆ ಗೆಳೆತನ..

ಆದರದನ್ನು ಒಪ್ಪಲಿಲ್ಲ ನಮ್ಮಿಬ್ಬರ ಮನೆತನ,
ಸುಳ್ಳು ಕಥೆಯ ಹೇಳಿ ಬೆಳೆಸಿದರು ನಮ್ಮ ನಡುವೆ ಹಗೆತನ..

ನಂತರ ಅವಳ ಮರೆಯಲು ಬಹಳ ದುಃಖಿಸಿತ್ತು ನನ್ನೀ ಮನ,
ಮತ್ತೆ ಎಂದೆಂದೂ ಆಗಲೇ ಇಲ್ಲ ನನ್ನ ಬಾಳಲ್ಲಿ ಅವಳಾಗಮನ..

ಶುಕ್ರವಾರ, ಏಪ್ರಿಲ್ 6, 2012

ಈ ಲೈಫಲ್ಲೇನೂ ಇಲ್ಲಾ


ನಾನೊಬ್ಬ ಚೆಲುವೆಯ ನೋಡಿದೆ..
ಅವಳೂ ನನ್ನ ನೋಡಿದಾಗ ನಾನಲ್ಲೇ ಬಿದ್ದೆ..
ಕೆಲದಿನದಲ್ಲಿ ಅವಳ ಮನವ ನಾ ಗೆದ್ದೆ..
ಆದರೆ, ನನ್ನ ಮನದಲ್ಲೇ ಬಹುದಿನದಿಂದ ನಾ ಯೋಚಿಸುತ್ತಿದ್ದೆ,
ಈ ಲೈಫಲ್ಲೇನೂ ಇಲ್ಲಾ ಬರೀ ಅನ್ನ-ಸಾರು ರಾಗಿಮುದ್ದೆ...!

ಅವಳೂ ಕೂಡ ತನ್ನ ಮನೆಯವರ ಒಪ್ಪಿಸಿದಳು..
ನಾನು ನನ್ನ ಮನೆಯಲ್ಲಿ ಹೇಳಿಕೊಂಡೆ ನನ್ನ ಮನದ ಅಳಳು..
ಅಂತೂ ಇಂತೂ ನಮ್ಮವರು ಒಪ್ಪಿಕೊಂಡುಹೊರಟರು ಅವಳ ನೋಡಲು..
ನನ್ನಲ್ಲಾಗ ಒಂದುಕ್ಷಣ ಮೂಡಿತು ಕವನದ ಒಂದು ಸೊಲ್ಲು..
ಅದೇ ಈ ಲೈಫಲ್ಲೇನೂ ಇಲ್ಲಾ ಬರೀ ಕಷ್ಟ-ದುಃಖವೆಂಬ ಕಲ್ಲು-ಮುಳ್ಳು...!!


ಹಾಗೂ ಹೀಗೂ ನಮ್ಮ ಮದುವೆ ಆಯಿತು..
ಒಂದೇ ವರ್ಷಕ್ಕೇ ಮಗುವೂ ಆಗಿಹೋಯಿತು..
ಜೀವನದ ಬೆಲೆ ಆಗ ನನಗೆ ಗೊತ್ತಾಗಿತ್ತು..
ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು..
ನನಗೀಗ ಒಂದು ಸಾಲು ನೆನಪಾಯಿತು..
"ಈ ಲೈಫಲ್ಲೇನೂ ಇಲ್ಲಾ ಸಮಸ್ಯೆಯೇ ಮುಗಿಯೊಲ್ಲಾ ಬಂದರೂ ನನ್ನ ಸಾವಿನ ಹೊತ್ತು...!!!

ಮಂಗಳವಾರ, ಮಾರ್ಚ್ 6, 2012

<<<..""ನನ್ನ ಕವನ""..>>>




ಮನಸ್ಸಿಲ್ಲದ ಮನಸ್ಸಿನಿಂದ ಕನಸ ಕಾಣುವುದ್ಯಾಕೋ..?
ನನಸಾಗದ ಕನಸ ಕಂಡು ಮನಸ ನೋಯಿಸುವುದ್ಯಾಕೋ..?

ನಯ ವಿನಯ ತೋರುತಾ ನಯವಂಚನೆ ಮಾಡುವುದ್ಯಾಕೋ.?
ನಯನದ ಕಣಿವೆಯಂಚಿನಲ್ಲಿ ಜಲಧಾರೆ ಹರಿಸುವುದ್ಯಾಕೋ.?

ಮನ-ಮನೆ ಮುರಿಯುವ ಮಾತನಾಡುವುದ್ಯಾಕೋ.?
ತಪ್ಪಾಗಿದ್ದರೂ ತಪ್ಪನ್ನು ಸವಿಮಾತಿಂದ ಮರೆ ಮಾಚುವುದ್ಯಾಕೋ.?

ಹೇಳದೇ ಕೇಳದೇ ಎದೆಯಲಿ ಪ್ರೀತಿ ಮೂಡುವುದ್ಯಾಕೋ.?
ಕಾರಣ ನೀಡದೇ ಮೋಸವ ಮಾಡಿ ಮರೆಯಾಗುವುದ್ಯಾಕೋ.?

ಮಡದಿಯಿಲ್ಲದ ಮನೆ ಮಸಣವಾಗುವುದ್ಯಾಕೋ.?
ಮಸಣದಲ್ಲೂ ಕೂಡ ಈ ಮನ ಅವಳ ನೆನೆಯುವುದ್ಯಾಕೋ.?

ಮನ ಮರುಭೂಮಿಯಾದರೂ ಪ್ರೇಮಕುಸುಮ ಚಿಗುರುವುದ್ಯಾಕೋ.?
ಪದೇ ಪದೇ ಅವಳ ನೆನಪ ಸಿಂಚನ ಚಿಮ್ಮುವುದ್ಯಾಕೋ.?

ಇಷ್ಟೋಂದು ಪ್ರಶ್ನೆ ಈ ದಿನ ನನ್ನಲ್ಲಿ ಮೂಡಿದ್ದು ಯಾಕೋ.?
ಕವನದ ಪಯಣಕೆ ಅಪರಿಚಿತಳೊಬ್ಬಳು ಸ್ಪೂರ್ತಿಯಾಗುವುದ್ಯಾಕೋ..?

ಸೋಮವಾರ, ಜನವರಿ 16, 2012

("ಗಾಳಿಪಟ" ಚಿತ್ರದ "ಕವಿತೆ.. ಕವಿತೆ.." ಹಾಡಿನ ಧಾಟಿಯಲ್ಲಿ ನನ್ನ ಪ್ರಯತ್ನ...) ಒಲವೇ ಒಲವೇ ನೀನ್ಯಾಕೆ ನಗುತಿರುವೆ ಒಲವೇ.. ನಿನ್ನ ನಗುವು ನನ್ಯಾಕೆ ಸೆಳೆದಿಹುದು ಚೆಲುವೆ.. ನನ್ನುಸಿರಾ ಉಸಿರಲ್ಲಿ ನಿನ್ನೆಸರ ಕುಣಿತ.. ಓ ಚೆಲುವೆ ನೀನನ್ನ ಜೀವನದಾ ಮಿಡಿತ.. ಒಲವೇ ಒಲವೇ ನೀನ್ಯಾಕೆ ನಗುತಿರುವೆ ಒಲವೇ.. ನಿನ್ನ ನಗುವು ನನ್ಯಾಕೆ ಸೆಳೆದಿಹುದು ಚೆಲುವೆ.. (೧) ನಿನ್ನಾ ನಯನ ಹೀಗ್ಯಾಕೆ ಕಾಡುವುದು ನನ್ನ.. ಎದೆಯ ಒಳಗೆ ಈ ನಿನ್ನ ಪ್ರೀತಿಯದು ಜನನ.. ಚಿಮ್ಮುತಿದೆ ಈ ನನ್ನ ಎದೆಯೊಳಗೆ ಆಸೆ.. ಓ ಗೆಳತಿ ನೀನೀಡು ವರಕೊಡುವ ಭಾಷೆ.. ನಿನ್ನಾ ನಯನ ಹೀಗ್ಯಾಕೆ ಕಾಡುವುದು ನನ್ನ.. ಎದೆಯ ಒಳಗೆ ಈ ನಿನ್ನ ಪ್ರೀತಿಯದು ಜನನ.. (೨) ನೀನೇ ನನ್ನ ಈ ಪ್ರೀತಿ ಕವನದಲಿ ಚರಣ.. ನೀನೇ ಬರದೇ ಈ ನನ್ನ ಕನಸುಗಳು ಮರಣ.. ನನ್ನೊಲವೇ ಈಗ್ಯಾಕೆ ನೀನಾದೆ ದೂರ.. ಏಕಾಂತ ಮನವನ್ನು ಮಾಡಿಹುದು ಭಾರ.. ನೀನೇ ನನ್ನ ಈ ಪ್ರೀತಿ ಕವನದಲಿ ಚರಣ.. ನೀನೇ ಬರದೇ ಈ ನನ್ನ ಕನಸುಗಳು ಮರಣ.. (೩)


ಶನಿವಾರ, ಜನವರಿ 7, 2012

""ಕವಿ ಕಲ್ಪನೆ""


ನಮಸ್ಕಾರ ಸ್ನೇಹಿತರೇ....

ನಂಗಿವತ್ತು ಒಂದ್ಮಾತು ನಿಜ ಅನ್ನಿಸ್ತಾ ಇದೆ.
ಕವಿಗಳಿರ್ತಾರಲ್ಲಾ ಕವಿಗಳು, ಇವ್ರಿಗೆ ನಮ್ಮ ಅಂದ್ರೆ ಮನುಷ್ಯರ ಮನಸು & ಹಾರ್ಟ್ ಅಂತ ಏನ್ ಕರಿತೀವಿ ನೋಡಿ, ಎರಡು ಅಂಗಗಳು ಒಂಥರಾ "ಸರಿಯಾಗಿ ಕಲಸಿ ಹದ ಮಾಡಿಟ್ಟ ಗೋಧಿ ಹಿಟ್ಟು ಇದ್ದ ಹಾಗೆನೆ..
ಯಾಕಂತೀರಾ.? ಕೆಳಗಡೆ ಬನ್ನಿ,

ನೀವೇ ಥಿಂಕಿಸಿ ಗೋಧಿ ಹಿಟ್ಟನ್ನು ಹದಮಾಡಿ ರೆಡಿಯಾಗಿಟ್ಟರೆ,
ಚಪಾತಿ ಮಾಡಬಹುದು,
/ ಇಂಚು ದಪ್ಪಗಿರೋ ರೊಟ್ಟಿ ಮಾಡಬಹುದು,
ಪೂರಿ ಮಾಡಬಹುದು,
ಯಾವ್ದೂ ಬೇಡಾಂದ್ರೆ ಇನ್ನೊಂದ್ಸ್ವಲ್ಪ ನೀರು ಮಿಕ್ಸ್ ಮಾಡಿ "ಗೋಧಿ ತೆಳ್ಳಾವು"(ಬಹುಷಃ ನೀರುದೋಸೆ ಅಂತಾರೆ) ಮಾಡಿ ತಿನ್ನಬಹುದು,
ಅದೂ ಬೇಡಾಂದ್ರೆ, ನಿಮಗೆ ಮಾಡಲು ಆಸಕ್ತಿ ಹಾಗು ಸಮಯ ಇವೆರಡೂ ಇದ್ದ್ದರೆ, ಬಗೆ ಬಗೆಯ ಕುರುಕಲು ತಿನಿಸನ್ನು ಮಾಡಬಹುದು, ಮಾಡುತ್ತ್ತಾರೆ,

ಹಾಗೆ ಮನಸು & ಹಾರ್ಟನ್ನೂ ಸಹ ನಮಗೆ ಃಏಗೆ ಬೇಕೊ ಹಾಗೆ ಬದಲಾಯಿಸುತ್ತೇವೆ, ಬದಲಾಯಿಸುತ್ತಿದ್ದೇವೆ..
ಉದಾ:> ಒಬ್ಬ ಮರುಭೂಮಿಯಾಗಿಸುತ್ತಾನೆ,
ಇನ್ನೊಬ್ಬ ಆಕಾಶ ತೋರಿಸುತ್ತಾನೆ,
ಮತ್ತೊಬ್ಬ ಬಾವಿ ಅಗೆಯುತ್ತಾನೆ,
ಮಗದೊಬ್ಬ ಸರೋವರ ಅಂತಾ ಹೆಳ್ತಾನೆ,
ಇನ್ನೂ ಕೆಲವರು "ಕಾಲಿಡಬ್ಬಾ" ಅಂತಾರೆ,
ಚಂಚಲ ಚಿತ್ತ ಅಂತಾರೆ,
ತಾವು ಪ್ರೀತಿಸಿದವರಿಗೆ ಹೋಲಿಸುತ್ತ್ತಾರೆ,
ಮತ್ತೊಂದಿಷ್ಟು ಜನರಿದ್ದಾರೆ,
ಅವರು ತಮ್ಮಾಸೆ ಈಡೇರಲಿಲ್ಲಾಂತ  ಹರ್ಟಿಗೆ ಮುಳ್ಳಿನ ತಂತಿಯನ್ನು ಬಿಗಿಯಾಗಿ ಕಟ್ಟುತ್ತಾರೆ,
ಪಾಪ ಹಾರ್ಟು "ಅಯ್ಯೋ ನನ್ನ ಬಿಟ್ಟಾಕ್ರೋ" ಅಂತಾ ಬೊಬ್ಬಿಟ್ಟರೂ ಯಾರೂ ಕೇಳೋರಿಲ್ಲಾ.

ಇನ್ನು ಮನಸ್ಸು.
ಮನಸು ಅನ್ನೋದು ಏಣು ಅಂತಾ ಇನ್ನುವರೇಗೂ ಯಾರಿಗೂ ತಿಳಿಯಲಿಲ್ಲಾ.
ಆಂಗ್ಲ ಶಬ್ಧಕೋಶದಲ್ಲೂ ಪದಕ್ಕೆ ಅರ್ಥವಿಲ್ಲವೆಂದು ನನ್ನ ಗೆಳೇಯನೊಬ್ಬ ಹೇಳಿದ ನೆನಪು.
ಹಾಗದ್ರೆ, ಮನಸು ಅಂದ್ರೆ ಏನು,?
ಇದು ಒಂದು ಮಾನವನ ಅಂಗ ನಾ.? ಅಥವಾ ಹಾರ್ಟ್, ಹೃದಯ ಅಂತಾರಲ್ಲಾ ಅದರ ಪರ್ಯಾಯ ಪದನಾ.?
ನೀವೇ ಹೇಳಿ....:)

ಗುರುವಾರ, ಜನವರಿ 5, 2012

""ಜೋಪಡಿಯ ಬದುಕು""



ಸುಕ್ಕುಗೆಟ್ಟ ತಲೆಗೂದಲು..
    ಪಾತಾಳಕ್ಕಿಳಿದ ಕಂಗಳು..
ನೀರು ಕಾಣದ ಮರಗೆಟ್ಟಿರುವ ಶರೀರ..
ಐಶರಾಮಿ ಬಾಳ್ವೆಯ ಕನಸಿನಲ್ಲಿರುವ ಮನಗಳು..
ಮಳೆಯಿರಲಿ ಚಳಿಯಿರಲಿ, ಸುಡುವ ಬಿಸಿಲಿರಲಿ,
  ನೋವಲ್ಲಿ ನಲಿವು ಕಾಣುವ ಇವರು ಜೋಪಡಿಗರು..(೧)



ಅನರಕ್ಷತೆಯ ಭವ್ಯ ನೆಂಟಸ್ತಿಕೆ
 ಶುದ್ದ ವ್ಯವಹಾರದ ಮಾತುಗಾರಿಕೆ..
ಎಲ್ಲರೂ ನಮ್ಮವರೆಂದು ಮೋಸ ಹೋಗಿ,
 ನಂತರ ಬದುಕಲಿ ಗೋಳಾಡುವರು
ಮಳೆಯಿರಲಿ, ಚಳಿಯಿರಲಿ, ಸುಡುವ ಬಿಸಿಲಿರಲಿ,,
        ಶ್ರಮದಿಂದ ದುಡೀವ ಇವರು ಜೋಪಡಿಗರು.. (೨)


ಕೇವಲ ಮಾನ ಮುಚ್ಚಲಷ್ಟೇ ವಸ್ತ್ರವ ತೊಟ್ಟು,,
  ನಾಳೆ ಬಗ್ಗೆ ಚಿಂತಿಸದೇ ಈದಿನದಲ್ಲಿ ಖುಷಿಯ ಕಂಡು,,
ಪಡೆದ ಕಾಸಿಗೆ ತಕ್ಕ ಕೆಲಸ ಮಾಡುವ ಕೂಲಿಗಳಿವರು..
 ಕೆಟ್ಟ ಚಟಕ್ಕೆ ಬಲಿಯಾಗಿ ಅರೆಹೊಟ್ಟೆ ತಿಂದು ದುಃಖಿಸುವರು.,
ಮಳೆಯಿರಲಿ, ಚಳಿಯಿರಲಿ, ಸುಡುವ ಬಿಸಿಲಿರಲಿ,,
ಜೋಪಡಿಯಲ್ಲೇ ಬದುಕು ಮುಗಿಸುವ ಇವರು ಜೋಪಡಿಗರು... (೩)

""ಒಂದರಿಂದ ಒಂದರವರೆಗೆ""

ಹೊಸ ಪ್ರಯತ್ನ... ಫಲ ನೀಡಿ ಆಶಿರ್ವದಿಸಿ...

  ""ಒಂದರಿಂದ ಒಂದರವರೆಗೆ""

ಒಂದೆರಡು ಸಲದ ಭೇಟಿ,

ಮೂರ್ನಾಲ್ಕು ಸಲ ಮಾಡಿದ ದೂರವಣಿ ಕರೆ,

ಐದಾರು ಮಾತುಗಳಲ್ಲೇ ಅವಳಲ್ಲಿ ಸ್ನೇಹವಾಯಿತು.

ಏಳಂಟು ದಿನದಲ್ಲಿ ಆ ಸ್ನೇಹ ಪ್ರೇಮಕ್ಕೆ ವಾಲಿತು.

೯-೧೦ ಜನರಿದ್ದ ಅವಳ ಮನೆಯಲ್ಲಿ ಒಪ್ಪಿಸಿ,

೧೧-೧೨ ದಿನಗಳ ಕಾಲ ತಿಕ್ಕಾಡಿ ಕಿತ್ತಾಡಿ ನಮ್ಮನೆಯವರನೆಲ್ಲಾ ಒಪ್ಪಿಸಿದೆ.

೧೩ನೇ ದಿನ ನೀನನಗೆ ಜೋಡಿಯಲ್ಲವೆಂದು ಅವಳಂದಾಗ,

ನನಗಾಗ ನಿಂತಲ್ಲೇ ನನ್ನದೇ ೧೪ನೇ ದಿನದ (ವೈಕುಂಟ)ಸಮಾರಾಧನೆಯಾದಂತೆ ಭಾಸವಾಯಿತು.

೧೫ನೇ ದಿನ ಅವಳನ್ನು ವಿಚಾರಿಸಲು ನನ್ನ ೧೬-೧೭ ಮಂದಿ ಸ್ನೇಹಿತರು ಮುಂದಾದಾಗ,

ಅವಳಿಗಿನ್ನು ೧೮ರ ಬಾಲ್ಯಬುದ್ಧಿಯೆಂದು ಅವರನ್ನು ಸಮಾಧಾನಿಸಿದೆ.

೧೯ನೇ ದಿನ ಮನದ ಕಾಟ ತಾಳಲಾರದೇ ಅವಳ ಹುಡುಕುತಾ ಹೊರಟಾಗ,

೨೦-೨೧ ಐಶರಾಮಿ ಕಾರು ನಿಂತಿರುವುದನ್ನು ಕಂಡು,

೨೨-೨೩ ದಿನಗಳವರೆಗೂ ಕೇವಲ ಹಣಕ್ಕಾಗಿ ಪ್ರೀತಿಯೇ ಎಂದು ಯೋಚಿಸುತ್ತಿದ್ದೆ,

೨೪ನೇ ದಿನಾಂಕದಂದು ಅವಳ ಮದುವೆಯೆಂದು ಗೊತ್ತಾದಾಗ,

ನನ್ನ್ನೆದೆಯ ಕೋಣೆಯಲ್ಲಿ ನನ್ನೀ ಮನ ೨೫ ಸಲ ಕಣ್ಣೀರಿಟ್ಟಿತ್ತು.

೨೬-೨೭ ಈ ಎರಡು ದಿನ ಅವಳ ಬಗ್ಗೆ ಚಿಂತಿಸಿ,

೨೮ನೇ ದಿನ ಅವಳನ್ನು ಸಂಪೂರ್ಣವಾಗಿ ಮರೆಯಲು ಪ್ರಯತ್ನಿಸಿ,

೨೯ರಂದು ನಾ ದೂರದ ಊರಿಗೆ ತೆರಳಿದಾಗ,

೩೦-೩೧ ಜನರಿದ್ದ ಆ ಬಸ್ಸಿನಲ್ಲಿ ಮತ್ತೊಮ್ಮೆ ನನ್ನ ಮನವ ಕದಿಯಲು ಹವಣಿಸುತ್ತಿತ್ತು,
ರೂಪಸಿಯೊಬ್ಬಳ 'ಒಂದು' ಜೋಡಿ ನಯನಗಳು..........

ಬುಧವಾರ, ಜನವರಿ 4, 2012

'ವದನ ವರ್ಣನೆ'

ನಿನ್ನೀ ಸುಂದರ ನಗುವ ನೋಡಲು ಬಲುಚೆಂದ..
               ಈ ನಣುಪಾದ ರೇಶಿಮೆ ಕೆನ್ನೆ ಇನ್ನೂ ಅಂದ..


ಹಾರಾಡುವ ಆ ನಿನ್ನ ಮುಂಗುರುಳು ಅತೀ ಸುಂದರ..
         ಈ ಸೌಂದರ್ಯ ರಾಶಿಯ ನೋಡಿ ನಾಚಿದ ಆ ಚಂದಿರ..


ಕೆಂದಾವರೆಯ ಎಸಳಿನಂತಿರುವ ಆ ಅಧರ..
           ನೋಡಿ ಮೂಡಿದವು ಆಸೆಗಳು ಥರ ಥರ..


ನಿನ್ನ ಕಂಗಳು ಯಾರಿಗಾದರೂ ಮಾಡುವುದು ಮೋಡಿ..
             ನಾ ಸ್ತಬ್ದನಾಗಿದ್ದೆ ಆ ಜೋಡಿ ತಾರೆಗಳ ನೋಡಿ..



ಶ್ವೇತವಜ್ರಗಳಂತಿರುವ ಆ ನಿನ್ನ ದಂತಪಂಕ್ತಿ..
          ಎಷ್ಟೇ ಹೊಗಳಿದರೂ ಆಗದು ಅತೀಶಯೋಕ್ತಿ..


'ವದನ ವರ್ಣನೆ'ಗೇ ಇಷ್ಟು ಪದಗಳು ಕಾಲಿಯಾಗಿರುವಾಗ,,
    ನಿನ್ನ ಪೂರ್ತಿಯಾಗಿ ವರ್ಣಿಸಲು ಎಲ್ಲಿ ಹುಡುಕಲಿ ಪದಗಳ ನಾನೀಗ..?