ಶನಿವಾರ, ಡಿಸೆಂಬರ್ 31, 2011

ಓ ಮನಸೇ .....

ಓ ಮನಸೇ ಓ ಮನಸೇ ಹೀಗೇಕೆ ಕಾಡುವೆಯೇ..?
    ಓ ಕನಸೇ ಓ ಕನಸೇ ನನ್ಯಾಕೆ ಕೊಲ್ಲುವೆಯೇ..?
ನೀನು ದೂರ ಹೊದ ಮೇಲೆ,
             ಹೇಗೆ ಅಂತ ಇರಲಿ ನಾನು.?
ನೀನೇ ಹೇಳು ಓ ನನ್ನ ಪ್ರಾಣವೇ... (೧)


ಓ ಗಿಣಿಯೇ ಓ ಗಿಣಿಯೇ ನೀನ್ಯಾಕೆ ಮರೆಯಾದೆ..?
    ನಾ ನಿನಗೆ ನಾ ನಿನಗೆ ಈಗ್ಯಾಕೆ ಹೊರೆಯಾದೆ..?
ನಿನ್ನ ಮುದ್ದು ಪ್ರೀತಿ ನಂಬಿ,
      ನಾನು ಇಂದು ಮೋಸ ಹೋದೆ.?
ಹೀಗೇಕಾಯ್ತು ಹೇಳೆ ಓ ಪ್ರಾಣವೇ....? (೨)


ಓ ಬೆಡಗಿ ಓ ಬೆಡಗಿ ಎಲ್ಲಿರುವೇ ನನ್ನ ನೀಮರೆತು..?
   ಬಾ ನೋಡು ನಾನಿನಗೆ ಕೇಳಿಸುವೆ ನನ್ನ ಎದೆಮಾತು...
ನೀನು ಎಲ್ಲೇ ಹೇಗೆ ಇದ್ರೂ,
         ನಾನು ನಿನ್ನ ಪ್ರೀತಿ ದಾಸ..
ಇದೇ ಸತ್ಯ ಕೇಳೆ ಓ ಪ್ರಾಣವೇ.....(೩)

ಗುರುವಾರ, ಡಿಸೆಂಬರ್ 29, 2011

ಕನ್ನಡ "ಸಿದ್ಲಿಂಗು" ಚಿತ್ರದ ""ಚಂಬೋ ಚಂಬು" ಧಾಟಿಯಲ್ಲಿ ನನ್ನೀ ಪ್ರಯತ್ನ

ಕನ್ನಡ "ಸಿದ್ಲಿಂಗು" ಚಿತ್ರದ ""ಚಂಬೋ ಚಂಬು" ಧಾಟಿಯಲ್ಲಿ ನನ್ನೀ ಪ್ರಯತ್ನ ತಪ್ಪಾದರೇ ಕ್ಷಮಿಸಿ ತಿದ್ದಿ ಹೇಳಿ..

"ನೋಡಿ ನಾವೇ ನಮ್ ಸ್ವಂತ ಬುದ್ಧಿ ಉಪಯೋಗ್ಸಿ ಒಂದು ಕವನ ಬರೆದರೆ, ನಮ್ಗೂ ಬರೆಯೋಕೆ ಬರುತ್ತೆ ಅಂತಾ ಗೊತ್ತಾಗುತ್ತೆ, ಇನ್ನೂ ಬರಿಬೇಕು ಅನ್ನೋ ಆಸೆ ಹುಟ್ಟತ್ತೆ..
ಅಬ್ಬಬ್ಬಾಂದ್ರೆ ಏನ್ರೀ ಒಂದಿಷ್ಟು ಲೈಕ್ ಕಮ್ಮಿ ಬೀಳುತ್ತೆ, ಯಾರಾದ್ರೂ ತಿಳ್ದೋರು ತಪ್ಪನ್ನ ತಿದ್ಕೊಳೋಕೆ ಹೇಳ್ತಾರೆ...."

 
ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...

ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...

ದೊಡ್ಡ ಕವಿಯಾಗು ಅಂತ ನಾ ಅಂದೆನಲ್ಲಾ..
ಬೇರೆಯವರ ಕವಿತೆ ಕದ್ದೆಯಲ್ಲಾ..
ನೀ ಮಾಡಿದ್ದು ನಿನಗೇ ಸರಿಯಲ್ಲಾ...

 
ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...

 
("ನಾನಿಲ್ಲಿ ಏನಕ್ಕೆ ಬಂದಿದಿನಿ ಗೊತ್ತಾ.?
ನಂಗೂ ಬರ್ಯೋಕೆ ಬರುತ್ತೆ ಅಂತಾ ತೋರ್ಸೊದಿಕ್ಕೆ...")

 
ಸೆಲೆಬ್ರೇಟ್ಟಿ ಅಪ್ಪುಡೇಟಿಗೆ ನೂರೇಂಟು ಲೈಕು..
ನಮ್ಮ ಕವನ ಪೋಸ್ಟು ಆದರೆ ಬರೋದೆಲ್ಲಾ ಮಾರ್ಕು..
ಹೆಚ್ಚಾದರೆ ಹೊಡಿರಿ ಬುಡಕ್ಕೆ..
ಸರಿಯಾದರೆ ತಟ್ಟಿರಿ ಭುಜಕ್ಕೆ...
ಮಾತ್ರೆಯಿಲ್ಲದ ಕವನಾ ಸರಿಯಿಲ್ಲಾ.....

 
ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...

 
("ಅದೇನೋ ಅಂತಾರಲ್ಲಾ ಬಂದ್ರೆ ಬಾಗಿಲು ಹೋದ್ರೆ ಕೂದಲು" ಹಾಗೆನೇ)

 
ಮನಸಿಲ್ಲದೇ ಏನಾದರೂ ಕವನ ಬರೆಯಬೇಡಿ..
ಮತಿಯಿಲ್ಲದೇ ಯಾರಾದರೂ ಕಾಪಿ ಹೊಡೆಯಬೇಡಿ...
ಧಮ್ಮಿದ್ದರೆ ಬರೀರಿ ಸ್ವಂತದ್ದು..
ಇಲ್ಲಾಂದ್ರೆ ಸುಮ್ನಿರಿ ನೀವೆಂದೂ...
ಕದ್ದ ಕವನಾ ಎಂದೂ ನಿಮದಲ್ಲಾ......

 
ಇದ್ದಿದ್ದಿದ್ದಂಗೆ ಬರೆದ್ದಾಕು ಇಷ್ಟ ಆದ್ರೆ ಓದ್ತಾರೆ..
ಶಂಭೋ ಶಂಭು ಕೇಳೋ ಶಂಭು...

 
ದೊಡ್ಡ ಕವಿಯಾಗು ಅಂತ ನಾ ಅಂದೆನಲ್ಲಾ..
ಬೇರೆಯವರ ಕವಿತೆ ಕದ್ದೆಯಲ್ಲಾ..
ನೀ ಮಾಡಿದ್ದು ನಿನಗೇ ಸರಿಯಲ್ಲಾ...

 
(ಈಗ ಏನಾಗುತ್ತೆ ಅಂದ್ರೆ ಪ್ರಕಾಶ್ ಶ್ರೀನಿವಾಸ್ ಅವರ ವಿಷ್ಯದಲ್ಲಾಯ್ತಲ್ಲಾ ವಾದ-ವಿವಾದ,
ಅಯ್ಯೋ ಅದೇಲ್ಲಾ ಹಳೆ ವಿಷ್ಯಾ ಬಿಟ್ಟಾಕಿ.....)

ಶನಿವಾರ, ಡಿಸೆಂಬರ್ 17, 2011

""ನನ್ನ ಕವನ""

ಹಾಳಾದ್ ದಿಲ್ ನಿನ್ನನ್ನೇ ಕೇಳ್ತು..
          ನಾನೇನ್ಮಾಡ್ಲಿ ನೀ ಹೇಳು ಚೈತು..
ನೀನಂತೂ ಇಲ್ಲಾ ನನ್ನಲ್ಲಿ ಇಂದು..
                  ನಾನಿನ್ನ ಹುಡುಕಲಿ ಎಲ್ಲೇಲ್ಲಿ ಎಂದು.? (1)


ನೀ ನನ್ನ ಪ್ರಾಣ ಅಂತ ನೀನೇ ಹೆಳಿದೆ ಅಂದು..
     ಆದರೆ ಯಾಕೆ ಕೋಪ ಈ ಪ್ರಾಣದ ಮೇಲೆ ಇಂದು.?
ಆ ದಿನ ನನ್ನದೆಯಲ್ಲಿ ನೀನೇ ಪ್ರೀತಿಯ ಬಳ್ಳಿ ಹಬ್ಬಿಸಿದೆ..
     ಆದರೀದಿನ ನೀನೇ ಯಾಕೆ ಚಿಗುರುವ ಮುನ್ನವೇ ಕತ್ತರಿಸಿದೆ.? (2)


ನಗುವ ನಯನ ಅಂತ ಯುಗಳಗೀತೆ ಹಾಡಿ ನನ್ನ ಅಟ್ಟಕ್ಕೇರಿಸಿದೆ..
               ಪ್ರೀತಿ ಮಧುರ ತ್ಯಾಗ ಅಮರ ಅಂತ ನೀನನ್ನ ಹಳ್ಳಕ್ಕೆ ತಳ್ಳಿದೆ..
ಆದರೂ ನಾನು ನನಗಿಂತ ಹೆಚ್ಚು ನಿನ್ನ ಪ್ರೀತಿಸಿದೆ..
        ಕಾರಣವಿಲ್ಲದೇ ಯಾಕೆ ನೀನನ್ನ  ನಿನ್ನಿಂದ ದೂರವಾಗಿಸಿದೆ..? (3)


ಕೋಗಿಲೆಯಂತ ನಿನ್ನ ಧ್ವನಿ ಕೇಳಿ ನನ್ನ ನಾ ಮರೆತಿದ್ದೆ..
          ಕೋಗಿಲೆಯೇ ಗಿಡುಗನಾಗಿ ನನ್ನೆದೆಯ ನೀ ಕುಟುಕಿದ್ದೆ..
ನಾ ಮಾಡಿದ ತಪ್ಪಾದರೂ ಏನಂತ ನಾನು ಚಿಂತಿಸುತ್ತಿದ್ದೆ..
      ನಂಗೇನು ಗೊತ್ತಿತ್ತು ನೀನನ್ನ ಬಿಟ್ಟು ಪರಸತಿಯಾಗಲು ಹವಣಿಸುತ್ತಿದ್ದೆ..(4)

ಇದೇನಾ ಪ್ರೀತಿ ಇದೇನಾ ಪ್ರೇಮ.?
             ಪ್ರೀತಿ ಹೆಸರಲಿ ಗೆದ್ದಾಗಿತ್ತು ಕಾಮ..
ಕೊನೆಗೂ ನನ್ನ ಏಕಾಂಗಿಯಾಗಿ ಬಿಟ್ಟು ಹೋದೆ ನೀ ಒಂದುದಿನ..
           ಈಗಲೂ ಆಸೆ-ಮೋಸದ ಬಲೆಯಲ್ಲಿ ಸಿಲುಕಿಕೊಂಡಿದೆ ನನ್ನೀ ಮನ.. (5)

ಬುಧವಾರ, ಡಿಸೆಂಬರ್ 14, 2011

""ಜಂಗಮಗಂಟೆಯಲ್ಲಿ ಭೂತ ಭಾಗ ೩""



ನಮಸ್ಕಾರ ಸ್ನೆಹಿತರೇ....
ಇದು "ಜಂಗಮಗಂಟೆಯಲ್ಲಿ ಭೂತ"ದ ಮುಂದುವರೆದ ಭಾಗ..
   ಇದು ಮೊದಲೆರಡು ಸಂಚಿಕೆಗಿಂತ ಭಿನ್ನ ಹಾಗು ಭಯಾನಕವಾಗಿಸಲು ಪ್ರಯತ್ನಿಸಿದ್ದೇನೆ..

ಇಲ್ಲಿಂದ,,:>>

ಆ ಅನಾಮಿಕ ಧ್ವನಿ ಅಷ್ಟೊಂದು ಹೆದರಿಸಿದರೂ, ಏನೋ ಒಂದು ಭಂಡ ಧೈರ್ಯದಿಂದ ನಿದ್ದೆಗೆ ಶರಣಾದೆ..

ಮುಂದೆ,,,

ಸುಖನಿದ್ರೇಲಿ ಮುಗುಳ್ನಗುತ್ತಿದ್ದಂತೆ ಕಾಣುವಂತೆ ಮಲಗಿದ್ದ ರಮೇಶನ ಮೊಬೈಲ್ ಇದ್ದಕ್ಕಿದ್ದಂತೆ ಅರಚಾಡಲು ಶುರುಮಾಡಿತು. ಎಷ್ಟೋ ವರ್ಷ ತಪಸ್ಸಿನಿಂದ ಏಳೋರಂತೆ ಎದ್ದು ಮೆಲ್ಲಗೆ ಗಡಿಯಾರ ನೋಡಿದ. ಸಮಯ 5 ಗಂಟೆ ಆಗಿತ್ತು. ಬೆಳಬೆಳಿಗ್ಗೆ ಯಾರಪ್ಪ ಅಂತ ಪೋನ್ ರಿಸೀವ್ ಮಾಡಿದ. ಒಂದು ಇಂಪಾದ ಗೀತೆ ಈ ಹಾಡನ್ನ ನಿಮ್ಮ ಕಾಲರ್ ಟ್ಯೂನ ಮಾಡಿಕೊಳ್ಳಲು ಒಂದು ಒತ್ತಿ ಅಂತ ಮದುರ ಕಂಟದ ದ್ವನಿ ಕೇಳಿತು. ಕಾಲ್ ಕಟ್ ಮಾಡಿದ. ಮಲಗೋಣ ಅಂತ ತಯಾರಾದ ಯಾಕೋ ನನ್ನ ನೆನಪಾಗಿ ರೂಮ್ ಗೆ ಬಂದ
    ನಾನಿರದಿದ್ದನ್ನು ಕಂಡು ಒಮ್ಮೆ ದಂಗಾದ. ಮನೆಯೆಲ್ಲಾ ಹುಡುಕಿ ನಂತರ ಮನೆ ಟಾರಸಿ ಮೇಲೆ ಎಚ್ಚರ ತಪ್ಪಿ ಬಿದ್ದಿದ್ದ ನನ್ನ ಎಬ್ಬಸಿದ..
ನಾನು ಒಮ್ಮೆಲೆ ಗಾಬರಿಯಿಂದ ಎದ್ದು 'ಬೇಡ ನನ್ನ ಏನೂ ಮಾಡಬೇಡ ನಿನಗೆ ಏನ್ ಬೇಕೋ ಕೊಡ್ತೀನಿ ನನ್ನ ಬಿಟ್ಟು ಬಿಡು' ಅಂತ ಹೇಳೋಕೆ ಶುರುಮಾಡಿದೆ. ನನ್ನ ನೋಡಿ ಅವನು ಗಾಬರಿಯಾಗಿ, 'ಏನಾಯ್ತೋ ನಾನ್ ಕಣೋ ರಮೆಶಾ' ಅಂದ.
ಕೊಂಚ ಚೇತರಿಸಿಕೊಂಡು, ಅದು.. ಅದು.. ಅಂತ ತೊದಲೋಕೆ ಶುರು ಮಾಡಿದೆ. 'ಏನಾಯ್ತು ಹೇಳೊ..' ಅಂದ ರಮೆಶ..

  ಆಗ ನಾನು.. "ರಾತ್ರಿ ಮಲಗಿದ್ದೆ ನಿದ್ದೆನೂ ಬಂದಿತ್ತು, ಸಡನ್ನಾಗಿ ಏನೋ ಸೌಂಡ್ ಆಯ್ತು ನಾನು ಇಲಿಗಳಿರ್ಬಹುದು ಅಂತ ಸುಮ್ನಾದೆ. ಸ್ವಲ್ಪೊತ್ತಿನ ನಂತ್ರ, ಮೈಮೇಲೆ ಏನೊ ಹರಿದಾಡಿದ ಹಾಗೆ ಆಯ್ತು,
ಮೊದ್ಲೇ ಹೆದರಿದ್ದ ನಂಗೆ ನಿದ್ದೆ ಎಲ್ಲೋ ಮಾಯವಾಗಿ ಎಚ್ಚರವಾಯ್ತು, ಆಗ mostly 12-12:30 ಆಗಿತ್ತು ಅನ್ಸುತ್ತೆ..ನಾನು ಬೆಡ್ ಲೈಟ್ ಆನ್ ಮಾಡಿ ನೋಡಿದಾಗ ಉಸಿರೇ ನಿಂತಂತಾಗಿತ್ತು. ಯಾಕಂದ್ರೆ ನಾನು ಮಧ್ಯಾಹ್ನ ಮೋರಿಯಲ್ಲಿ ಬಿಸಾಕಿದ ಮೊಬೈಲ್ ನನ್ನ body ಮೇಲೆ ಬ್ರೇಕ್ ಡ್ಯಾನ್ಸ್ ಮಾಡ್ತಿತ್ತು..!!:(

ಅಷ್ಟರಲ್ಲಿ ರಮೇಶ ಜೋರಾಗಿ ನಗುತ್ತಾ "ಸಕತ್ತಾಗಿ ಕಾಮಿಡಿ ಮಾಡ್ತ್ಯಾ" ಅಂದ..

    ನಾನು ಕೋಪದಿಂದ,, "ನಾನಿಲ್ಲಿ ಹೆದ್ರ್ಕೊಂಡು ಸಾಯ್ತಿದಿನಿ ನಿಂಗೆ ಕಾಮಿಡಿ ಥರ ಕಾಣುತ್ತಾ" ಅಂತ ಬೈದೆ. ಅದಕ್ಕೆ ರಮೇಶ್ "ಒಕೆ ಒಕೆ ಮುಂದೇನಾಯ್ತು..?"
ನಾನು  ಭಯದಿಂದ ಏನ್ಮಾಡ್ಬೇಕು ಅಂತ ತಿಳಿದೇ, ಅಲ್ಲಿಂದ ಓಡೋಕೆ ಶುರು ಮಾಡ್ದೆ.. ಇಡೀ ಮನೆ ಸುತ್ತು ಹಾಕಿದಿನಿ ಗೊತ್ತಾ..? ನೀನು ನಂಬ್ತಿಯೊ ಇಲ್ವೊ ಗೊತ್ತಿಲ್ಲ್ಲಾ ಒಳ್ಳೆ ಅಥ್ಲೇಟಿಕ್ ಚಾಂಪಿಯನ್ ಥರ ನನ್ನ ಹಿಂದೆ ಓಡಿ ಬರ್ತಿತ್ತು. ಆಮೇಲೆ ಎಲ್ಲೂ ಜಾಗ ಸಿಗ್ದೇ ಟೆರೆಸ್ ಮೇಲೆ ಹೋಗೋಣಾಂತ ಓಡಿಬಂದೆ ಬರುವಾಗ ಮೆಟ್ಲಿಗೆ ಕಾಲು ತಾಗಿ ಎಡವಿ ಬಿದ್ದೆ, ಅಷ್ಟೆ ಅದು ನನ್ನ ಎದೆ ಮೇಲೆ ಹಾರಿಬಂದು ಕುಳಿತುಕೊಂಡಿತು.
one more thing ಹೇಳೋಕೆ ಮರ್ತಿದ್ದೆ,ಆ ಮೊಬೈಲ್ ಗೆ 2 ಕಾಲು 4ಕೈ ಇತ್ತು. ಕೀಪ್ಯಾಡ್ ಪೂರ್ತಿ ಕೆಂಪಾಗಿತ್ತು. ಕ್ಯಾಮೆರಾ ಲೆನ್ಸಿಂದ ಏನೋ ಒಂಥರಾ ರೆಡ್ ಕಲರ್ ಲಿಕ್ವಿಡ್ ಸುರಿತಾ ಇತ್ತು. ಸ್ಪೀಕರಿಂದ ವಿಕಾರವಾಗಿ ನಗೋ ಸೌಂಡ್ ಬರ್ತಿತ್ತು..
ಇದೆಲ್ಲಾ ಹೊರರ್ ಫಿಲ್ಮ್ ಅಲ್ಲಿ ನೋಡಿ ನಗ್ತಿದ್ದ ನಂಗೆ ಎದುರಲ್ಲಿ ರಿಯಲ್ಲಾಗಿ ನೋಡ್ತಿದ್ದ ನನ್ನ heart ಕೈಗೆ ಬಂದಂತಾಯ್ತು..
ಆಗ ಅದು ಮಾತಾಡೋಕೆ ಶುರುಮಾಡ್ತು. ""ಹಾಯ್ ಫ್ರೆಂಡ್  ನಾನ್ ಹೇಳಿದ್ದು ಮರೆತೋಯ್ತಾ.?ಇವತ್ತು ನಿನ್ನ ಕೊನೇ ದಿನ ಅಂತಾ ಹೇಳಿರ್ಲಿಲ್ವಾ.? oh sory ma dear freind..  ನಾವಿಬ್ರೂ ಮೀಟ್ ಮಾಡಿ ತುಂಬಾ ಟೈಮ್ ಆಯ್ತಲ್ವಾ ಅದ್ಕೆ ಸರ್ ಇಂದ ಫ್ರೆಂಡ್ ಗೆ ಪ್ರಮೋಶನ್ ತಗೊಂಡಿದಿನಿ.. ಅದ್ಬಿಟ್ಟಾಕು ಇನ್ನರ್ಧ ಗಂಟೆ ಮಾತ್ರ ಬ್ಯಾಲೆನ್ಸ್ ಇರೋದು, ಯಾವ್ಯಾವ್ god ಹತ್ರ pray ಮಾಡ್ಬೇಕು ಅಂತಿದ್ಯೋ ಎಲ್ಲಾ ಪಟಾಪಟ್ ಮುಗಿಸ್ಕೊಂಡ್ಬಿಡು.. finaly today is urs last day so,, 1st ಕಾಲಿನ ಬೆರಳಿಂದ start ಮಾಡ್ತಿನಿ"" ಅಂತ ಹೇಳಿದಾಕ್ಷಣ ನನ್ನ ಕಾಲ್ಬೆರಳು ಶಾರ್ಪ್ ಚಾಕುವಿನಿಂದ ಕಟ್ ಮಾಡಿದ ಕ್ಯಾರೆಟ್ ಥರ ತುಂಡಾಗಿ ಬಿತ್ತು, ಆಗ ನಾನು ಜೋರಾಗಿ ಕಿರುಚಿದೆ.ಆಗ ನಂಗೆ ಭಯದಲ್ಲೂ ಕ್ಯೂರಾಸಿಟಿ ಮೂಡಿತ್ತು, ಯಾಕಂದ್ರೆ, ಅಷ್ಟು ಜೋರಾಗಿ ಕಿರುಚ್ತಾ ಇದ್ರೂ ನನ್ನ ವಾಯ್ಸ್ ನಂಗೇ ಕೇಳಿಸುತ್ತಿರಲಿಲ್ಲಾ, ಆ ಧ್ವನಿ ನನ್ನ ಒಂದೊಂದೇ ಪಾರ್ಟ್ ಹೆಸ್ರು ಹೇಳಿದಾಕ್ಷಣ ಆ ಪಾರ್ಟ್ ತುಂಡಾಗಿ ಬೀಳುತ್ತಿತ್ತು,,
(ಕಾಲು, ಕೈ, ಹೊಟ್ಟೆಯೊಳಗಿನ ಕರಳು, ಕಣ್ಣು, ಕಿವಿ, ಕೊನೆಗೆ ನನ್ನ ತಲೆಯೊಳಗಿನ ಮೆದುಳು ಕೂಡ,) ಆದರೂ ನನ್ನಲ್ಲಿ ತ್ರಾಣ ಹಾಗೆ ಇತ್ತು. ನಾನಾಗ ಮತ್ತೊಂದ್ಸಲ ಜೋರಾಗಿ ಕೂಗಿದೆ, ಆಗ ಏನೂ ಇರಲಿಲ್ಲ ಅಷ್ಟರಲ್ಲಿ ನಂಗೆ ತಲೆ ಸುತ್ತಿದಂತಾಗಿ ಇಲ್ಲೇ ಬಿದ್ದೆ..""

ಆಗ ರಮೇಶ,, "ಹೊಗಲೋ ಪುಕಲಾ..! ಎಲ್ಲೋ ಕನಸು ಕಂಡು ಹೆದರಿದ್ದೀಯ ಮೊಬೈಲ್ ಗೆ ಕೈ ಕಾಲಂತೆ ಬಾಯಂತೆ ಯಾರತ್ರ ಹೇಳ್ತೀಯ ಕಥೇನಾ.? ನಡಿ ನಡಿ ಮುಖ ತೊಳ್ಕೊ ತಿಂಡಿ ತಿನ್ನೋಕೆ ಹೋಟೆಲ್ ಗೆ ಹೋಗೋಣ" ಅಂತ ಹೇಳ್ತಾ ಇದ್ದಾಗ ರಮೇಶನ ಮೊಬೈಲ್ ಮತ್ತೆ ಬಡ್ಕೊಳೋಕೆ ಶುರುವಾಯ್ತು..

ಆಗ ರಮೇಶ "ಈ ಕಂಪನಿಗಳಿಗೆ ಬೇರೆ ಕೆಲ್ಸಾನೇ ಇಲ್ಲ ಅನ್ಸುತ್ತೆ" ಅಂತ ಗೊಣಗಿ ಕಾಲ್ ರಿಸೀವ್ ಮಾಡ್ದ ಆಗ ಮತ್ತದೇ ದ್ವನಿ.. ತಂತಾನೇ ಸ್ಪೀಕರ್ ಆನ್ ಆಯಿತು. ""HAI FRND ಏನ್ ಕನಸು ಅಂದುಕೊಂಡ್ಯಾ no dis is 100% true ಅವನು ಹೇಳಿದ್ದು ಎಲ್ಲಾ ನಿಜ ನಾನು ಸಾಯಿಸೋಕೆ ಅಂತಾನೇ ಬಂದಿದ್ದೆ ಆದರೆ,""
ಅಂತ ಹೇಳ್ತಿದ್ದಾಗ, ನಾನು ಮೊಬೈಲ್ ಕಸಿದುಕೊಂಡು, "ಏನ್ ಬೇಕಾದ್ರೂ ಮಾಡ್ಕೊ" ಅಂತ ಹೇಳಿ ಮೊಬೈಲ್ ಬಿಸಾಕಿದೆ..

ಆದರೆ ಇನ್ನೊಂದು ಆಶ್ಚರ್ಯ ಏನಪ್ಪಾಂದ್ರೆ ಆ ಧ್ವನಿ ಈಸಲ ಬರೀ ಕಂಗ್ಲೀಷ್ ಭಾಷೆ ಮಾತ್ರ ಬಳಸಿತ್ತು..!! ಬೇರೆ ಇನ್ಯಾವ ಭಾಷೆನೂ ಮಾತಾಡಲಿಲ್ಲ.

 ಆಗ ರಮೇಶ,, "ಇದು ದೆವ್ವದ ಕಾಟ ಇರಬೇಕು ನಂಗೆ ಗೊತ್ತಿರೋ ಮಲಯಾಳಿ ಮಂತ್ರವಾದಿ ಹತ್ರ ಹೋಗೋಣ" ಅಂದ. ನಂಗೆ ಇದರಲೆಲ್ಲ ನಂಬಿಕೆ ಇಲ್ಲದಿದ್ರೂ, ಮನಸ್ಸಿಗೆ ತುಂಬಾ ಹೆದರಿಕೆ ಆಗಿದ್ದರಿಂದ ಒಪ್ಕೊಂಡೆ..
ರಮೇಶ ಬೈಕ್ ಓಡ್ಸೋಕು ಭಯ ಅಂದ. ಸೋ ನಾನೇ ಬೈಕ್ ಓಡಿಸ್ಕೊಂಡು ಮಂತ್ರವಾದಿ ಮನೆಗೆ ಹೊದ್ವಿ

    ನಮ್ಮನ್ನ ನೋಡಿ, ಮಂತ್ರವಾದಿ ಮಲಯಾಳಂನಲ್ಲಿ ಏನೋ ಹೇಳಿದ, ನಂಗೆ ಪೂರ್ತಿ ಅರ್ಥ ಆಗ್ಲಿಲ್ಲ, ಅದು ಅವನಿಗೆ ಗೊತ್ತಾಗಿ which language.? ಅಂತ ಕೇಳ್ದ. 'ಕನ್ನಡ' ಅಂದ್ವಿ..
'ಮೊದಲು ಸ್ನಾನ ಮಾಡಿ ಬನ್ನಿ' ಅಂತ ಬಾವಿ ತೋರಿಸಿದ, ನಾವಿಬ್ಬರೂ ಆ ಬಾವಿಯ ಬಳಿ ಇದ್ದ ಬಿಂದಿಗೆಯಿಂದ ನೀರೇತ್ತಿಕೊಂಡು ಶಾಸ್ತ್ರಕ್ಕೆ ಸ್ನಾನ ಮಾಡಿಕೊಂಡು ಬಂದು ಅವನ ಎದುರಲ್ಲಿ ಕೂತ್ಕೋಂಡ್ವಿ..
ಆ ಮಂತ್ರವಾದಿ ಬಾಯಲ್ಲ್ಲಿ ಏನೇನೋ ಮಂತ್ರ ಬಣಗುಡಿಸಿ, ""ಇದೆ ಇಲ್ಲೊಂದು ಸಮಸ್ಯೆ ಇದೆ"" ಅಂತಾ ಆಪ್ತಮಿತ್ರ ಅವಿನಾಶ್ ಸ್ಟೈಲಲ್ಲಿ ಹೇಳಿದ,, ನನಗೆ ಅಂತಾ ಸೀರಿಯಸ್ ಮೂಮೆಂಟಲ್ಲೂ ನಗು ತಡೆಯಲಾರದೇ, "ಸಮಸ್ಯೆ ಇಲ್ಲಲ್ಲ್ಲಾ ಸ್ವಾಮಿ ನನ್ನ ಮೊಬೈಲಲ್ಲಿರೋದು" ಅಂದೆ.

ಅದಕ್ಕವನು 'ಸರಿ ಆ ಜಂಗಮವಾಣಿಯನ್ನು ಕೊಡಿ" ಅಂದ. ಆಗ ನನ್ನ ಮುಖ ಸಪ್ಪೆಯಾಯಿತು, ಯಾಕಂದ್ರೆ ನಾವು ಕೋಪದಲ್ಲಿ ಬೀಸಾಡಿದ್ದ ಮೊಬೈಲ್ ಅನ್ನು ತರಲು ಮರೆತಿದ್ದೆ, ಆ ಮಂತ್ರವಾದಿ ನನ್ನ ಮುಖ ನೋಡಿ ಮೊಬೈಲ್ ಕೊಡುವಂತೆ ಮತ್ತೊಮ್ಮೆ ಸನ್ನೆ ಮಾಡಿದ.ಆಗ ರಮೇಶ "ಕ್ಷಮಿಸಿ.. ಗಾಬರಿಯಲ್ಲಿ ಪೋನ್ ತರೊದನ್ನ ಮರ್ತುಬಿಟ್ಟಿದ್ದಿವಿ ನಾನು ಹೋಗಿ ತರ್ತಿನಿ" ಅಂತ ಹೊರಟಾಗ,, ""ಆ ತೊಂದ್ರೆ ನಿಮಗೆ ಬೇಡಾ ಅಂತಾ ನಾನೇ ಇಲ್ಲಿಗೆ ಬಂದೆ"" ಅಂತಾ ಹಳೇ ಫಿಲ್ಮ್ ವಿಲನ್ ಥರ ನೆಡ್ಕೊಂಡು ಬರ್ತಾ ಇರೊ ನನ್ನ ಮೊಬೈಲನ್ನು ನೋಡಿ, ನಮಗಿಂತ ಜಾಸ್ತಿ ಆ ಮಂತ್ರವಾದಿಗೆ ಹೆದರಿಕೆಯಾಗಿ 'ನಖಶಿಖಾಂತ' ನಡುಗುತಿದ್ದ್ದ.............


ಕ್ಷಮಿಸಿ ಸ್ನೇಹಿತರೇ.. to be continued.....:)

ಶನಿವಾರ, ಡಿಸೆಂಬರ್ 10, 2011

....ಓಂ ಶಾಂತಿ ಓಂ....

ನೀನೇ ನನ್ನ ಪ್ರೀತಿ ನೀನೇ ರೀತಿ...
  ನೀನೇ ನನ್ನ ಶಾಂತಿ ನೀನೇ ನನ್ನ ಆಸ್ತಿ...
ನೀನೇ ಎಂದೂ ನನ್ನ ಮನದೊಡತಿ...

ಓಂ ಶಾಂತಿ ಶಾಂತಿ ಓಂ ಶಾಂತಿ...
      ನಿನ್ನಿಂದ ಮನಸಿಗೆ ಹೊಸ ಕಾಂತಿ... (೧)

ಕಾಡಬೇಡ ನೀನು ಸ್ವಪ್ನದಲಿ ಬಂದು...
          ನಗಬೇಡ ನೀನು ಎದುರಲಿ ನಿಂದು...
ಸೋತು ಹೋಗುವೆ ನಾನು ಓ ಮನದರಸಿ...

ಓಂ ಶಾಂತಿ ಶಾಂತಿ ಓಂ ಶಾಂತಿ...
    ನೀನಿಲ್ಲದೇ ಎಲ್ಲಿ ನನ್ನ ಸುಖ ಶಾಂತಿ..? (೨)

ನಾನೀಗ ಅರಿತೆ ಈ ಪ್ರೀತಿ ತುಂಬಾ ಮೋಸ...
            ಪ್ರೀತಿ ಹೆಸರ ಹೇಳಿ ಆಡುತಾರೆ ಸರಸ...
ಇಲ್ಲೂ ಹೀಗೇನಾ..? ಅಥವಾ ಸಹಜ ನಾ..?

ಓಂ ಶಾಂತಿ ಶಾಂತಿ ಓಂ ಶಾಂತಿ...
   ಈ ಪ್ರೀತಿ ನಿಮಗ್ಯಕೆ ಮಹಾರಾಯ್ತಿ..? (೩)

ನೀನೇ ನನ್ನ ನೋಡಿ ಪ್ರೀತಿ ಮೋಡಿ ಮಾಡಿ...
           ಯಾಕೆ ಹೋದೆ ಓಡಿ ಧನಿಕನ ನೋಡಿ...
ಪ್ರೀತಿಯಲ್ಲೂ ಲಾಭವ ಹುಡುಕಲು ಹೋದೆಯಾ..?

ಓಂ ಶಾಂತಿ ಶಾಂತಿ ಓಂ ಶಾಂತಿ...
       ನಿನ್ನ ನೆನಪಲ್ಲಿ ಹಾಳಾಯ್ತು ಮನಶ್ಯಾಂತಿ... (೪)

ಹಾಳಾದ ಈ ಮನಸೂ ನನ್ನ ಮಾತೆಲ್ಲಿ ಕೇಳಿತು..?
          ಮತ್ತೊಬ್ಬ್ಬಳ ನೋಡಿ ಖುಷಿಯಿಂದ ಜಿಗಿಯಿತು...
ಮತ್ತದೇ ಪ್ರಾಸಪದ ಮನದಲ್ಲಿ ಮೂಡಿತು...

ಓಂ ಶಾಂತಿ ಶಾಂತಿ ಓಂ ಶಾಂತಿ...
    ನಿನ್ನಿಂದ ಮನಸಿಗೆ ಹೊಸ ಕಾಂತಿ... (೫)

ಭಾನುವಾರ, ಡಿಸೆಂಬರ್ 4, 2011

""ನನ್ನ ಕವನ""

ಹೀಗೇಕೆ ಹೀಗೇಕೆ ನಾನಾದೆ..
            ಕಾರಣವ ಹೇಳೆ ಓ ಒಲವೇ. 
ನಿನ್ನ ಕಂಡಾಗ ನನ್ನಿಂದ ನಾನೇ ಮಾಯವಾದೆ.. (೧)


ಮೌನವಾಗಿದ್ದ ನನ್ನ ಕನಸಿಗೆ ನೀ ಮಾತು ಕಲಿಸಿದೆ..
                    ಛಿದ್ರವಾಗಿದ್ದ ನನ್ನ ಮನಸಲಿ ನೀ ಚಿತ್ರ ಬಿಡಿಸಿದೆ..
ತಮ ತುಂಬಿದ್ದ ನನ್ನ ಬದುಕಲಿ ನೀ ದೀವಟಿಗೆಯಾದೆ..(೨)


ಮಾಯಾ ಜಿಂಕೆಯಂತೆ ಬಂದು ನನ್ನ ಚಂಚಲನಾಗಿಸಿದೆ..
                   ಸುಡು ಬಿಸಿಲಲ್ಲಿ ತಂಗಾಳಿಯಾಗಿ ನನ್ನ ಮನದಲಿ ವಾಸವಾದೆ..
ಹೇಗೋ ಇದ್ದವನ ಹೀಗೆ ಬದಲಿಸಿ ನಡುನೀರಲ್ಲಿ ಕೈಬಿಟ್ಟು ಹೋದೆ..(೩)


ಹೀಗೇಕೆ ಮಾಡಿದೆಯೆಂದು ನಾ ಕೇಳಲಾರೆ..
                             ಈ ನಿನ್ನ ನೆನಪಲಿ ನಾ ಕೊರಗುತಾ ಕೂರಲಾರೆ..
ಆದರೆ ಈ ಕಲ್ಲನ್ನು ಶಿಲೆಯಾಗಿಸಿದ್ದನ್ನು ಎಂದೂ ಮರೆಯಲಾರೆ.. (೪)


ಈ ಜೀವನದ ತಿರುವುಗಳೇ ಸರಿಯಿಲ್ಲ..
            ಇನ್ನೊಬ್ಬಳಿಗೆ ನನ್ನ ಮನ ಸೋತು ಹೋಯ್ತಲ್ಲಾ..
ಅವಳೇ ನನ್ನ ಮುದ್ದಿನ ಮಡದಿ ಮೃದುಲಾ..! (೫)

ಶುಕ್ರವಾರ, ಡಿಸೆಂಬರ್ 2, 2011

...""ನನ್ನ ಗೋಳು""...

ತಿಳಿಯಾದ ಆಗಸದಲ್ಲಿ ಕ೦ಡಿತು ತು೦ಬಿದ ರಜನಿ....
                ಪ್ರೀತಿಯಲ್ಲಿ ಕೈಕೊಟ್ಟವಳ ನೆನೆದು ನಾನಾದೆ ತಲೆ ಬೋಳಿಸಿಕೊ೦ಡು ಘಜನಿ...

ಕನಸಲ್ಲಿ ಕ೦ಡ ಅವಳ ಮುಖ ಮುದ್ದಾಗಿದೆಯೆ೦ದು ಅನಿಸಿತ್ತು...
                 ಬ್ರಮಾಲೋಕದಿ೦ದ ಹೊರಬ೦ದಾಗ ಮೇಷ್ಟ್ರ ಕೈಇ೦ದ ಬೆನ್ನ ಮೇಲೆ ಗುದ್ದೊ೦ದು ಬಿದ್ದಿತ್ತು....


ಅವಳು ಸ೦ತಸದಿ೦ದ ಓಡಿ ಬ೦ದು ನನ್ನ ತಬ್ಬಿಕೊ೦ಡಳು...
          ಹ್ಯಾಪಿ ರಕ್ಷಾ ಬ೦ದನ್ ಅ೦ತ ರಾಖಿ ಕಟ್ಟಿ ಮರಳಿ ಓಡಿ ಹೋದಳು....

ಅವಳ೦ದಳು ನೀನಿರುವೆ ನನ್ನ ರಕ್ತದ ಕಣಕಣದಲ್ಲಿ ಎ೦ದೇ೦ದೂ...
              ಆದ್ರೆ ನ೦ಗೇನು ಗೊತ್ತಿತ್ತು ಅವಳ ದೇಹ ಸಕ್ಕರೆ ಕಾರ್ಖಾನೆಯ ಒಡತಿಯೆ೦ದು.....!!!

ಭಾನುವಾರ, ನವೆಂಬರ್ 27, 2011

""ಜಂಗಮಗಂಟೆಯಲ್ಲಿ ಭೂತ"" part 2

""ಜಂಗಮಗಂಟೆಯಲ್ಲಿ ಭೂತ""ದ ಚೇಷ್ಟೆಯನ್ನು ನೀವೆಲ್ಲಾ ಸೇರಿ ಒಂದ್ಸಲ ಸಹಿಸಿಕೊಂದಿದ್ದೀರಾ,, ಹಾಗೆ ಇನ್ನೊಂದು ಸಲ ಅಡ್ಜೆಸ್ಟ್ ಮಾಡ್ಕೋಳಿ ಪ್ಲೀಸ್..... ಇಲ್ಲಿ ತಂಕ ಏನಾಯ್ತು ಅಂತ ನಿಮ್ಗೆ ಗೊತ್ತಿದೆ ಮತ್ತೆ ಆ ಪ್ಲಾಶ್-ಬ್ಯಾಕ್ ಬೇಡಾ ಅಂದ್ಕೊತೀನಿ... so... ಬೆಳಿಗ್ಗೆಯಿಂದ ನೆಡೆಯುತ್ತಿದ್ದ ವಿಚಿತ್ರ ಘಟನೆಯಿಂದ ನಾನು ತುಂಬಾ ಹೆದರಿ ಕೊಂಡಿದ್ದ ನಾನು ರೂಮಿಗೆ ಹೋಗಲು ಭಯವಾಗಿ ನನ್ನ ಗೆಳೆಯ(ರಮೇಶ)ನ ಹತ್ತಿರ ಅಂಗಲಾಚಿ ಬೇಡಿಕೊಂಡು ಅವನನ್ನು ಒಪ್ಪಿಸಿ ಅವನ ರೂಮಿಗೆ ಹೊರಟೆ... ತಕ್ಷಣ ಏನೋ ನೆನಪಾಗಿ ಪಕ್ಕದಲ್ಲ್ಲಿದ್ದ ಟ್ರಾವೆಲ್ ಏಜೆನ್ಸಿ ಗೆ ಹೋಗಿ ನಮ್ಮೂರಿಗೆ ಒಂದು ಟಿಕೆಟ್ ರಿಸರ್ವೆಶನ್ ಮಾಡಿಸಿಕೊಂಡು ಬಂದೆ.. ಹಾಗೆ,, ಕೈಯಲ್ಲಿದ್ದ ಮೊಬೈಲ್ ಅನ್ನು ಅಲ್ಲೇ ಪಕ್ಕದಲ್ಲಿದ್ದ ಚರಂಡಿಗೆ ಎಸೆದು ರಮೇಶನ ಜೊತೆ ಆಟೊ ಹಿಡಿದು ಅವನ ಮನೆ ಕಡೆ ಹೊರಟೆ.. ಅಲ್ಲಿಗೆ ಹೋಗಿ ತಲುಪುವ ತನಕ ಸಂಜೆ ೬ ಗಂಟೆಯಾಗಿತ್ತು... ರೂಮಿಗೆ ಬಂದವನೇ ರಮೇಶ ರಾತ್ರಿ ಊಟವನ್ನು ಹೋಟೆಲಿಂದ ಪಾರ್ಸೆಲ್ ತರಲು ಹೊರಟ, ತಕ್ಷಣ ನಾನು ಅವನನ್ನು ತಡೆದೆ.. ರಮೇಶ ತನ್ನ ಮುಖ ಸಿಂಡರಿಸುತ್ತಾ,, ತಾನು ಹೋಗುವ ಕಾಯಮ್ ಹೋಟೆಲ್ ಗೆ ಪೋನ್ ಮಾಡಿ ಊಟ ತರಲು ಹೇಳಿದ.. ನಾನು ನನ್ನದೇ ಆದ ಲೋಕಕ್ಕೆ ಹೋಗಿ ಬೆಳಿಗ್ಗೆಯಿಂದ ಆದ ಇನ್ಸಿಡೆಂಟ್ ಗೆ ಕಾರಣ ಯಾರು,,? ಏನು..? ಅಂತ ಡೀಪಾಗಿ ಥಿಂಕಿಸ್ತಾ ಇದ್ದೆ.. ಅಷ್ಟರಲ್ಲಿ ರಮೇಶ ನನ್ನ ಬಳಿ ಬ೦ದು ಕುಳಿತು,, ನನ್ನ ಕೈ ಅದಮುತ್ತಾ "ಜಸ್ಟ್ ರಿಲಾಕ್ಸ್, ಮ್ಯಾನ್.. ಯಾರೋ ನಿನ್ ಪರಿಚಯದೋರೇ ಬೇಕೂ೦ತಾ ನಿ೦ಗೆ ಈ ಥರ ಫೇಕ್ ಕಾಲ್ ಮಾಡ್ತಿದ್ದಾರೆ ಅನ್ಸುತ್ತೆ, ಅದ್ಕೋಸ್ಕರ ನೀನು ಊರಿಗೆ ಹೋಗಿ ಕುಳಿತುಕೊಳ್ಳೋದು ಯಾಕೋ ಅಷ್ಟು ಸರಿ ಅನ್ನಿಸ್ತಿಲ್ಲಾ.." ಅ೦ತಾ ಸಮಾಧಾನ ಮಾಡೋಕೆ ಪ್ರಯತ್ನ ಪಟ್ಟ.. ನಾನು ಅವನ ಮಾತನ್ನು ಕೇಳಿ ಅವನನ್ನೇ ಅನುಮಾನದಿಂದ ನೋಡ್ದೆ..! ನನ್ನ ಲುಕ್ಕು ಅವನಿಗೆ ಅರ್ಥವಾಗಿ,, "ಮೂತಿ ಮೇಲೆ ಒ೦ದು ಬಿಟ್ರೆ ಹೇಗಿರುತ್ತೆ ಗೊತ್ತಾ...?" ಅ೦ತ ಕೋಪಿಸಿಕೊ೦ಡು ತಲೆ ಮೆಲೆ ಒ೦ದು ಕುಟ್ಟಿದ..! ಪ್ರತಿದಿನ ಎನಾದರೂ ತರಲೆ, ತಮಾಷೆ ಮಾಡಿ ಎಲ್ಲರನ್ನೂ ನಗಿಸಿ ಖುಷಿ ಪಡುತ್ತಿದ್ದ್ದೆ,, ಆದರೆ, ಇವತ್ತಿಡೀ ಸಪ್ಪೆಯಗಿದ್ದ ನನ್ನ ಮೋರೆಯಲ್ಲಿ ರಮೇಶ ನ ಮಾತು ಕೇಳಿ ಸಣ್ಣ ನಗುವೊ೦ದು ಹಾದು ಹೋಯಿತು.. ಹೀಗೆ ರಮೇಶ ಅದು ಇದು ಅ೦ತ ಮಾತಾಡಿ ಸ್ವಲ್ಪ ಕಾಮಿಡಿ ಮಾಡಿ ನನ್ನ ಮನಸ್ಸನ್ನು ಬೇರೆ ಕಡೆ ಡೈವರ್ಟ್ ಮಾಡೋಕೆ ಟ್ರೈ ಮಾಡ್ತಿದ್ದ but ನನ್ನ ಮನಸ್ಸಲ್ಲಿ ಅದೇ ಯೋಚನೆ ಇದ್ರೂ, ತೋರಿಕೆಗಾಗಿ ಮುಖದಲ್ಲಿ ನಗು ಕಾಣಿಸಲು ನಾನೂ ಪ್ರಯತ್ನಿಸುತ್ತಿದ್ದೆ.. ಸ್ವಲ್ಪ ಹೊತ್ತಿನ ನ೦ತರ ಹೊಟೆಲ್ ಇ೦ದ ಊಟ ಬ೦ತು, ನನಗೆ ಊಟ ಮಾಡಲು ಇಚ್ಚೆಯಿಲ್ಲದ್ದಿದ್ರೂ ದಿನಪೂರ್ತಿ ಸರಿಯಾಗಿ ತಿನ್ನದ ಕಾರಣ ಹೊಟ್ಟೆಯಲ್ಲಿನ parts ಭರತನಾಟ್ಯ ಮಾಡುತ್ತಿದ್ದವು so ಕೈಕಾಲು ಮುಖ ತೊಳೆದುಕೊ೦ಡು ಪಾರ್ಸೆಲ್ ತ೦ದಿದ್ದ ಊಟದ ಕವರನ್ನು ಬಿಡಿಸಿ ಬ್ಯಾಟಿ೦ಗ್ ಮಾಡಲು ರೆಡಿಯಾದೆ.. ಒ೦ದೆರಡು ತುತ್ತು ತಿನ್ನುವಷ್ಟರಲ್ಲಿ, ರಮೇಶನ ಮೊಬೈಲ್ ರಿ೦ಗಣಿಸಲು ಪ್ರಾರ೦ಭಿಸಿತು. ಮೊಬೈಲ್ ಪೋನಿನ ಸದ್ದು ಕೇಳಿದ ಕೂಡಲೇ ನನ್ನ ಎದೆಬಡಿತ ಜೋರಾಯ್ತು.. ರಮೆಶ ಕಾಲ್ ಎಟೆ೦ಡ್ ಮಾಡಿ ಎನೊ ಮಾತಾಡಿ ಕೊಟ್ಟೆ ಒ೦ದು ನಿಮಿಷ ಅ೦ತ ಸೆಲ್ ನನ್ನ ಕೈಗೆ ಕೊಟ್ಟು "ಅಮ್ಮಾ ಕಾಲಿ೦ಗ್" ಅ೦ದ.. ನಾನು ಒ೦ದ್ಸಲ ನಿಟ್ಟುಸಿರು ಬಿಟ್ಟು ಸೆಲ್ ಪೋನ್ ತಗೊ೦ಡು 'ಹೆಲೊ ಅಮ್ಮಾ' ಅಷ್ಟೆ..,, ಮತ್ತದೇ ದ್ವನಿ, ಮತ್ತದೇ ವಿಚಿತ್ರ ಭಾಷೆ, ಮತ್ತದೇ ತಣ್ಣನೆಯ ನಗು....:( ಆ ದ್ವನಿಯನ್ನು ನಾನು ಮತ್ತೆ ಕೇಳಿದಾಗ ಕುಳಿತಲ್ಲೇ ನಡುಗಿದೆ..ಇದ್ದಕ್ಕಿದ್ದ೦ತೆ ನನ್ನ ಮುಖದಲ್ಲಾದ ಬದಲಾವಣೆಯನ್ನು ಕ೦ಡು, ರಮೇಶ ನನ್ನ ಬಳಿ ಏನೋ ಹೇಳುತ್ತಿದ್ದ, ಕೇಳುತ್ತಿದ್ದ but ನನಗೆ ಅದ್ಯಾವ್ದು ಗೊತ್ತಾಗುತ್ತಿರಲಿಲ್ಲ,, ನನ್ನ ಕೈಲಿದ್ದ ಪೋನನ್ನು ಕಷ್ಟಪಟ್ಟು ತೆಗೆದುಕೊ೦ಡ, ತೆಗೆದುಕೊಳ್ಳುವಾಗ ಪೋನಿನ ಲೌಡ್ ಸ್ಪೀಕರ್ ಆನ್ ಆಯ್ತು.. ಅತ್ತಲಿನ ದ್ವನಿ- "hy boss.. ನೀನು ಮೊಬೈಲ್ ಬೀಸಾಕಿ ನಿನ್ friend ಮನೆಗೆ ಬ೦ದ್ರೆ ಮುಜೆ ತೆರಿಯಾದು ಅ೦ತ ಡಿಸೈಡ್ ಚೇಸಾವಾ,,? ನಾಕು ಸಬ್ ಗೊತ್ತು ನೀನು ಗಾವ್ ಜಾನೆ ಕೆ ಲಿಯೆ you have one reservation ticket. i knw that.. ಚೆಲ್ಲೊ.. ಸುಮ್ನೆ ಮ೦ಡೆಬಿಸಿ ಮಾಡ್ಕೊಳ್ದೇ ಅರಾಮ್ ಸೆ ರಹೊ. ಮಿ ತುಮಾಲಾ ಕಾನೆ ಕೆಲಿಯೆ ಇನಿಕಿ ನೈಟ್ ವಸ್ತಾ......"" ಅ೦ತ ಕಾಲ್ ಕಟ್ ಆಯ್ತು.. ಅ ಮಾತನ್ನು ಕೇಳಿ ನ೦ಗೆ ಹುಚ್ಚು ಹಿಡ್ಯೊದೊ೦ದು ಬಾಕಿ. ಬಾಕಿ ಎನು.? ಹುಚ್ಚು ಹಿಡೀದೇ ಹೋಯ್ತಾ ಅನ್ನುವಷ್ಟು ತಲೆಲಿ ಹುಳ ಕೆರೆಯತೊಡಗಿತು.. ನನ್ನ ಸ್ನೇಹಿತ ರಮೇಶ ಭಯದಿ೦ದ ನಡುಗುತ್ತಾ ರೂಮಿನ ಮೂಲೆ ಸೇರಿದ್ದ..! ಇವತ್ತು ರಾತ್ರಿ ಅ೦ತ ಟೈಮ್ ಕೊಟ್ಟಿದ್ದು, ಮತ್ತಷ್ಟು ನನ್ನ ಭಯವನ್ನು ಹೆಚ್ಚಿಸಿತು,,, ಆದರೂ ಏನಾಗುತ್ತೋ ಆಗಲಿ ಎ೦ಬ ಹು೦ಬು ಧೈರ್ಯದಿ೦ದ ಹೊಟ್ಟೆ ತು೦ಬಾ ಊಟ ಮಾಡಿ ಮಲ್ಕೊ೦ಡೆ... but.......... ನ೦ಗೇನ್ ಗೊತ್ತು ನಾನು ಹೊಟ್ಟೆ ತು೦ಬಿಸಿಕೊ೦ಡಿದ್ದರಿ೦ದ ಆ ಅನಾಮಿಕನಿಗೆ ಇನ್ನಷ್ಟು ಹುಮ್ಮಸ್ಸು ಕೊಡುತ್ತೆ ಅ೦ತಾ...????? to be continued... .

ಶುಕ್ರವಾರ, ನವೆಂಬರ್ 25, 2011

ನನ್ನ ಕಿತ್ತೋಗಿರೋ ಬ್ಲಾಗಿನ ಮುಂದಿನ ಆಕರ್ಷಣೆ.........!!!

1)""ಜಂಗಮಗಂಟೆಯಲ್ಲಿ ಭೂತ"" ದ ಮುಂದುವರೆದ ಭಾಗ.... 2)ಈ ಪ್ರೀತಿ ಇಷ್ಟೆನಾ.........??? ನಾನು ಒಬ್ಬ ಹುಡುಗಿಯ ಟಾಕಿಂಗ್ ಸ್ಟೈಲ್ ಗೆ ಕ್ಲೀನ್ ಬೋಲ್ಡ್ ಆಗಿದ್ದೆ.. ನಂಗೆ 100% ಗ್ಯಾರಂಟೀ ಇತ್ತು ಈ ಲವ್ ಸ್ಟೋರಿ ಸ್ಟ್ರಾಜಿಡಿ ಎಂಡಿಂಗ್ ಆಗುತ್ತೆ ಅಂತಾ ಬಟ್....??? 3)ನನ್ನ ಬಾಳಿನ ಮೂರು ಹೆಣ್ಣು(the three steps of my life).......!!!

ಬುಧವಾರ, ನವೆಂಬರ್ 9, 2011

|ದೂರದಲ್ಲೊಂದು ಸುಂದರ ಗುಡ್ಡ...
ಮೂತಿಯಲ್ಲೊಂದು ಸಣ್ಣ ಕುರುಚಲು ಗಡ್ಡ|

|ಮಂಜು ಮಸುಕಿದ ವಾತಾವರಣದಲ್ಲಿ
ಏನೂ ಕಾಣದಷ್ಟು ಮಬ್ಬು...
ಎರಡು ದಿನದಿಂದ ಸ್ನಾನ ಮಾಡದೇ
ದೇಹದಲ್ಲಿ ಬೆವರು ವಾಸನೆಯ ಗಬ್ಬು|

|ನಾನು ತಿಳಿದಿದ್ದೆ ನಾನಂದುಕೊಂಡಷ್ಟು
ಸುಂದರಿಯಲ್ಲ ನನ್ನವಳು...
ಆದರೆ ನಾನು ಮೂರ್ಛೆ ಹೋದೆ,
ಕಂಡಾಗ ಅವಳ ಹಳದಿ ಬಣ್ಣದ ಹಲ್ಲುಗಳು|

|ಕಾಣುತಿದೆ ಅಲ್ಲೊಂದು ಸುಂದರ ಪುಟ್ಟ ಊರು...
ಮಾಮೂಲಿ ಕವನ ಗೀಚಿ ನನಗೀಗಾಗಿದೆ ಬೋರು|

|ಈ ತರಹದ ಶೈಲಿ ನನ್ನಹೊಸ ಪ್ರಯತ್ನ...
ಕವಿ ಮನಸಿಗೆ ನೋವಾದಲ್ಲಿ ನಿಲ್ಲಿಸುವೆ ಈ ಯತ್ನ...

ಶನಿವಾರ, ನವೆಂಬರ್ 5, 2011

.....''ನನ್ನ ನಲ್ಲ''......

(ಮೊದಲ ಸಲ ಒಬ್ಬ ''ಹುಡುಗಿಯಂತೆ''
'ಥಿಂಕಿಸಿ' ಕವನ ರಚಿಸಿದ್ದಿನಿ ತಪ್ಪಾದಲ್ಲಿ ಕ್ಷಮಿಸಿ...!
specialy girls.... Sory girls....!)

|ನನ್ನ ಮನದಲಿ ಹೇಳಲು ಮಾತು
ನೂರಾರಿದೆ..
ಹೇಳಲಾಗದೇ ಎಲ್ಲಾ ತುಟಿಯಂಚಲೇ
ನಿಂತಿದೆ..
ನನ್ನ ನಲ್ಲನ ನೆನೆಯುತಾ ಈ ಮನವು
ಕಾಯುತಿದೆ.|


|ನಲ್ಲನ ಅರಸುತಾ ಪ್ರೀತಿಯ ಹುಡುಕುತಾ..
ಕಾಲವ ದೂಡುವೆ ನಾನೀಗ..
ಅವನೆಲ್ಲೇ ಸಿಕ್ಕರೂ ಹೇಗೇ ಇದ್ದರೂ..
ತಿಳಿಸಲೇಬೇಕು ನೀವೀಗ.|


|ಏನೇ ಅಂದರೂ ಕಾಟವ ಕೊಟ್ಟರೂ..
ನೀ ನನ್ನ ಜೀವ ಎಂದನಾತ..
ಒಂದೇ ಮಾತಲಿ ಮನವ ಕದ್ದು..
ಆಗಲು ಹೊರಟ ಪ್ರಾಣನಾಥ.|


|ಬಾಡಿದೆ ಭಾವ ಸೋತಿದೆ ಜೀವ..
ಅನುದಿನ ನೆನೆಯುತಾ ಅವನ್ನನ್ನೇ..
ನನ್ನೆಡೆ ಒಮ್ಮೆ ಬಂದರೆ ಅವನು..
ಕೊಡುವೆನು ನಲಿಯುತಾ ಮನಸನ್ನೇ.|


|ನನ್ನ ಮನದಲಿ ಹೇಳಲು ಮಾತು
ನೂರಾರಿದೆ..
ಹೇಳಲಾಗದೇ ಎಲ್ಲಾ ತುಟಿಯಂಚಲೇ
ನಿಂತಿದೆ..
ನನ್ನ ನಲ್ಲನ ನೆನೆಯುತಾ ಈ ಮನವು
ಕಾಯುತಿದೆ.|

ಶುಕ್ರವಾರ, ನವೆಂಬರ್ 4, 2011

(ತಮಿಳು ಚಿತ್ರ ''ಪಯ್ಯಾ'' ದ 'ಸುತ್ತುದೇ ಸುತ್ತುದೇ ಭೂಮಿ'
ಹಾಡಿನ ಧಾಟಿಯಲ್ಲಿ ನನ್ನ ಪ್ರಯತ್ನ ತಪ್ಪಿದ್ದಲ್ಲಿ ತಿದ್ದಿರಿ...)


|ಪ್ರೀತಿಯೇ ಪ್ರೀತಿಯೇ ಕೇಳು..
ನೀನೆ ನನ್ನ ನೀನೆ ನನ್ನ ಬಾಳು.|

|ಪ್ರೀತಿಯೇ ಪ್ರೀತಿಯೇ ಕೇಳು..
ನೀನೆ ನನ್ನ ನೀನೆ ನನ್ನ ಬಾಳು.|

|ರಾರಾರೆ ರಾರೆ ರಾರೆ ರಾರೇ
ಚೆಲುವೆಯೇ ಬಾರೇ..
ಈ ನನ್ನ ಪಾಡು ನೋಡಿ ನೋಡಿ
ನಗದಿರು ತಾರೆ..|

|ಏನೋ ಕಾಣೆ ನಿನ್ನ ನೋಡಿ ಮನಸಲಿ ಆಸೆ ಮೂಡಿತೀಗ..
ಏನೋ ಕಾಣೆ ನಿನ್ನ ಕಂಡ ಕನಸಿಗೆ ಜೀವ
ಬಂದಿತೀಗ.|

|ಪ್ರೀತಿಯೇ ಪ್ರೀತಿಯೇ ಕೇಳು..
ನೀನೆ ನನ್ನ ನೀನೆ ನನ್ನ ಬಾಳು.|


|ಆ ತುಂಟ ತುಂಟ ನಗುವಿನಲ್ಲೇ ಕಾಡುವೆ
ನೀ ಕಾಡುವೇ...
ನಿನ್ನ ಕಣ್ಣ ಸೆಳೆತದಲ್ಲೇ ಕೊಲ್ಲುವೆ ನನ್ನ ಕೊಲ್ಲುವೇ..
ಅಂತು ಇಂತು ನಿನ್ನ ಪ್ರೀತಿ ಪಡೆಯಲು... ಅಂತ್ಯದಲ್ಲಿ ನಾನು ಸಫಲನಾದೆನಾ.?
ಏನೂ ತಿಳಿಯದೇ ನನ್ನ ಹಣೆಯ ಚಚ್ಚಿಕೊಂಡೆನೇ..|


|ಪ್ರೀತಿಯೇ ಪ್ರೀತಿಯೇ ಕೇಳು..
ನೀನೆ ನನ್ನ ನೀನೆ ನನ್ನ ಬಾಳು.|

|ಪ್ರೀತಿಯೇ ಪ್ರೀತಿಯೇ ಕೇಳು..
ನೀನೆ ನನ್ನ ನೀನೆ ನನ್ನ ಬಾಳು.|


|ಒಂದುಸುಂದರ ದಿನದಿ ನಿನ್ನನು ನೋಡಿದೆ
ನಾ ನೊಡಿದೆ..
ಏನೋ ತಿಳಿಯದೇ ನಿನ್ನ ಚೆಲುವಿಗೆ ಸೋತೆನು
ನಾ ಸೋತೆನು.
ಹಾಗೋ ಹೀಗೋ ಇದ್ದೆ ನಾನು ಬದುಕುತಾ..
ನಿನ್ನ ಕಂಡು ಆದೆ ನಾ ನಿನ್ನ ಭಕುತ..
ಎಂಥಾ ಮೋಡಿ ಮಾಡಿ ನೀನು ಮಾಯವಾದೆಯೇ.|

ಹೇ....


|ಪ್ರೀತಿಯೇ ಪ್ರೀತಿಯೇ ಕೇಳು..
ನೀನೆ ನನ್ನ ನೀನೆ ನನ್ನ ಬಾಳು.|

|ಪ್ರೀತಿಯೇ ಪ್ರೀತಿಯೇ ಕೇಳು..
ನೀನೆ ನನ್ನ ನೀನೆ ನನ್ನ ಬಾಳು.|


|ರಾರಾರೆ ರಾರೆ ರಾರೆ ರಾರೇ
ಚೆಲುವೆಯೇ ಬಾರೇ..
ಈ ನನ್ನ ಪಾಡು ನೋಡಿ ನೋಡಿ
ನಗದಿರು ತಾರೆ..|

|ಒಮ್ಮೆ ನೀನು ನನ್ನ ಪುಟ್ಟ ಎದೆಯಲಿ ಬಂದು
ವಾಸವಾಗು..
ಅಷ್ಟು ಸಾಕು ನನ್ನ ಜೀವ ನಿನಗಾಗಿ ಎಂದೂ
ನೆನಪಿರಲಿ.|

....''ಜಂಗಮಗಂಟೆಯಲ್ಲಿ ಭೂತ''....

ಈ ಲೇಖನವನ್ನು ಓದಿ,,
ಭಯ ಆದ್ರೆ ಹೆದರಬಹುದು, ಕಾಮಿಡಿ ಅನ್ಸಿದ್ರೆ ನಗಬಹುದು, ಏನೂ ಅನ್ನಿಸದಿದ್ರೆ ಹಾಗೆ ಸುಮ್ಮನೆ ಕೂರಬಹುದು..
ಅದ್ರೆ ಇದನ್ನು ಓದಿ, ಥೂ...! ಅಂತ
ಕ್ಯಾಕರಿಸಿ ಉಗಿಬೇಕು ಅನ್ಸಿದ್ರೆ ನಂಗೆ msg ಮಾಡಿ class ತಗೊಳ್ಳಿ.. Bt publicಅಲ್ಲಿ ಮಾನ ಕಳೆಯ ಬೇಡಿ...!! Please

ಅದು...
''ಹೊಟ್ಟೆ ಬಿರಿಯುವಷ್ಟು ತಿಂದು ನೆಟ್ಟಗೆ ಮಲಗಿಕೊಂಡಿರುವ ಹೆಬ್ಬಾವಿನಂತೆ'' ಕಾಣುವ 'ಟಾರ್ರೋಡು'..
ಅಲ್ಲಿ ಒಬ್ಬ ಯುವಕ
ನೆಡೆದುಕೊಂಡು ಹೋಗುತ್ತಿದ್ದಾನೆ..
ಸಮಯ ಸುಮಾರು ಮಧ್ಯರಾತ್ರಿ 12:00-12:30 ಆಗಿರಬಹುದು.
ಹೊತ್ತಲ್ಲದ ಹೊತ್ತಾಗಿದ್ದರಿಂದ, ಆದಷ್ಟು ಬೇಗ ಮನೆ ಸೇರಲು ಎದುರುಸಿರು ಬಿಡುತ್ತಾ ಓಡುನಡಿಗೆಯಲ್ಲಿ ಹೋಗುತ್ತಿದ್ದಾನೆ..
ಅಷ್ಟರಲ್ಲಿ ಬಳೆ ಹಾಗು ಗೆಜ್ಜೆಗಳ ಸದ್ದು ಕೇಳಿಸಿತು..
ಆ ತಂಪಾದ ರಾತ್ರಿಯಲ್ಲೂ ಭಯದಿಂದ ಯುವಕನ ಮುಖದಲ್ಲಿ ಬೆವರು ಹನಿ ಕಾಣಿಸತೊಡಗಿತು...

ಯುವಕ ತನ್ನ ನಡಿಗೆಯಲ್ಲಿ ಮತ್ತಷ್ಟು ವೇಗ ಹೆಚ್ಚಿಸಿದ,, ಆಗ ಆ ಸದ್ದು ಇನ್ನಷ್ಟು ಸನಿಹದಲ್ಲಿ ಕೇಳಿಸತೊಡಗಿತು. ಜೊತೆಗೆ ದಾರಿದೀಪ(road light) ದ ಬೆಳಕಿನಲ್ಲಿ ಮಹಿಳೆಯ ನೆರಳೊಂದು ಕಂಡು, ಆ ಯುವಕ ಮತ್ತಷ್ಟು ಹೆದರಿ ಅಲ್ಲೆ ನಿಂತುಬಿಟ್ಟ,
ಆಗ ಆ ಮಹಿಳೆ ಇವನ ಭುಜದ ಮೇಲೆ ಕೈ ಇಟ್ಟು,, 'ಚಂದನ್...' ಅಂತ ಪಿಸುಗುಟ್ಟಳು ಈ ಕೈ ಹಾಗು ಪಿಸುಮಾತು ಪರಿಚಿತವಾಗಿತ್ತು. so ಆ ಯುವಕ ನಿಧಾನವಾಗಿ ಹಿಂದಿರುಗಿ ನೋಡಿದಾಗ, ಅವನ ಪ್ರೇಯಸಿ ನಿಂತಿದ್ದಳು. ತಕ್ಷಣ ಯುವಕನಲ್ಲಿದ್ದ ಭಯವೆಲ್ಲಾ ಮಾಯವಾಗಿ ತನ್ನ ಪ್ರೇಯಸಿಯನ್ನು ಬಿಗಿಯಾಗಿ ತಬ್ಬಿಕೊಂಡ..
ಅಷ್ಟೇ...! ''ಜಂಕಜಿಕ ಜಂಕಜಿಕ'' ಅನ್ನೊ ಕರ್ಕಶವಾದ ಮ್ಯೂಸಿಕ್ ಜೊತೆಗೆ ಡ್ಯುಯೆಟ್ ಶುರುವಾಯಿತು....!!!

ಕರ್ಮದ ಕಾಂಡ...!:@

ಈ ಫಿಲ್ಮ್ ಮಾಡೊ ನಿರ್ದೆಶಕರಿಗೆ, ಯಾವಾಗ ಹಾಡನ್ನು ಸೇರ್ಸಬೇಕು ಅಂತ ಟೈಂಸೆನ್ಸ್ ಇಲ್ವಾ,,? ಅಥವಾ ಈ ಹಾಡು ತೋರಿಸೋಕೆ ಈ ಥರ ಬಿಲ್ಡಪ್ ಕೊಟ್ರಾ,,? ಅಂತ ತಿಳಿಯದೇ ನನ್ನcell pone ಅಲ್ಲಿ
'youtube browser' closeಮಾಡಿ ತಡರಾತ್ರಿ ಆದುದರಿಂದ ಮಲ್ಕೊಂಡು ನಿದ್ದೆಗೆ ಶರಣಾದೆ...
(Oh sorry ನಾನು ಇಷ್ಟೊತ್ತು ಹೇಳಿದ್ದು
'youtube'ಅಲ್ಲಿ ನೋಡ್ತಿದ್ದ ಒಂದು ಅತ್ಯದ್ಭುತವಾದ ಕಿತ್ತೋಗಿರೋ ಡಬ್ಬಾ movie ಬಗ್ಗೆ..!!)

''ಟಿಟಿಟಿಂ ಟಿಟಿಂ ಟಿಟಿಟಿಂ''...
ಅನ್ನೋ ಸದ್ದಿನೊಂದಿಗೆ ಅಲರಾಂ ಬಾಯಿಬಡ್ಕೊಳ್ಳೊ ಮುಂಚೆನೇ ನನ್ನ celpone ಗೆ ಒಂದುmsg ಬಂತು.
ಆ ಶಬ್ಧಕ್ಕೆ ಎಚ್ಚರವಾಗಿ ನಿದ್ದೆಗಣ್ಣಲ್ಲೇ ಆ msg open ಮಾಡಿದಾಗ ಯಾವ್ದೋ unknown number ಇಂದ,
''hy iam mobile'' ಅಂತ msg ಬಂದಿತ್ತು..
ನಾನು ಜಾಸ್ತಿ ತಲೆ ಕೆಡೆಸಿಕೊಳ್ಳದೇ ''hellow iam celpone'' ಅಂತ replayಮಾಡಿ ಮತ್ತೆ ಮಲ್ಕೊಂಡೆ..

ಸ್ವಲ್ಪಹೊತ್ತಿನಲ್ಲೇ ಅಲರಾಂ ನ ಸದ್ದಿಗೆ ಪುನಃ ಎಚ್ಚರವಾಗಿ, ಹಾಸಿಗೆಯಿಂದ ಎದ್ದು ನನ್ನ ಬೆಳಗ್ಗಿನ 'ಪಾಪಕರ್ಮ'ಗಳನ್ನು ಮುಗಿಸಿಕೊಂಡು ಮತ್ತೆ room ಗೆ ಬಂದಾಗ ಮತ್ತದೇ number ಇಂದ ಅದೇ msg ಬಂದಿತ್ತು..

ನಾನು ಈ ಬಾರಿ ಆ msg ಗೆ 'so what' ಅಂತreply ಮಾಡ್ದೆ..

ಹಾಗೆ celpone ಪಕ್ಕಕ್ಕಿಟ್ಟು, ಬಾಗಿಲಲ್ಲಿ ಬಿದ್ದಿದ್ದ ಪ್ಯಾಕೆಟ್ ಹಾಲನ್ನು ತಂದು coffie ಮಾಡಿ ಕುಡ್ಕೊಂಡು pactory ಗೆ ಹೊರಟೆ.
ಆದರೆ pactory ಗೆ ಹೋದರೂ ನನ್ನ ತಲೆಯಲ್ಲಿ ಆ msg ಕಳುಹಿಸಿದ unknwon number ಯಾರದ್ದಿರಬಹುದು ಎಂಬ ಕುತುಹಲದ ಹುಳ ಕೆರೆಯುತ್ತಾ ಇತ್ತು..!

Computer ಮುಂದೆ ಕುಳಿತು ಏನನ್ನೋ ನೋಡುತ್ತಿರುವಾಗ ಮತ್ತೆ ಅದೇ numberಇಂದ ''i gonna eat u'' ಅಂತ msgಬಂತು.! ಅದನ್ನ ಓದಿ ನಾನು ಒಂದ್ಸಲ shock ಆದ್ರೂ ''ok best of luck'' ಅಂತ replay ಮಾಡ್ದೆ...

ನಂದೊಂದು ಕೆಟ್ಟ ಅಭ್ಯಾಸ,, ಯಾವ್ದಾದ್ರೂ ಹೊಸ number ಇಂದ msg ಬಂದ್ರೆ, ಅವ್ರ್ಯಾರು ಏನೂ ಅಂತ ತಲೆ ಕೆಡಿಸಿಕೊಳ್ಳದೇ ಅವರು ಅವರಾಗಿಯೇ ತಮ್ಮಹೆಸರನ್ನು ಹೇಳಬೇಕೆ ಹೊರತು ನಾನಾಗಿಯೇ ಅವರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಹೋಗುವುದಿಲ್ಲ..
(ಇಲ್ಲೂ ಹಾಗೆ ಮಾಡಲು ಹೋಗಿ ಏನೇನೋ ಆಗೋಯ್ತು...)
ಹಾಗೆ ಮಧ್ಯಾಹ್ನ canteen ಅಲ್ಲಿ ಊಟ ಮಾಡುತ್ತಿರುವಾಗ ಅದೇ number ಇಂದ call ಬಂತು.
ತಕ್ಷಣ ನಾನು ಆ call atend ಮಾಡಿದಾಗ ಆ ಕಡೆಯಿಂದ ಒಬ್ಬ ವ್ಯಕ್ತಿ ತಣ್ಣಗೆ 'ಸ್ಮೈಲುತ್ತಾ',,
''ಏನ್ ಬಾಸ್ ಊಟ ಮಾಡ್ತಿದ್ದಿರಾ..? ಮಾಡಿ ಮಾಡಿ ಮೇ ಭೀ ಯಹೀ ಚಾಹತಾ ಹೂ ಕೀ,
'ಒರುವೇಳೆ ನೀಂಗಳ್' 'ಚಾಲ ಚಾಲ'
'ತಿಂದುಂಡು ಮೈ ಬೆಳೆಸಿಕೊಂಡ್ರೆ,' 'ತುಮಾಲಾ' 'ಕಾನೆ ಮೆ ಬಡಾ ಮಝಾ ಅಯೆಗಾ,' coz i gonna eat you''ಅಂತ ಕನ್ನಡ,ಹಿಂದಿ ಇಂಗ್ಲಿಷ್,ಮರಾಠಿ,ತೆಲುಗು,ತಮಿಳ್ ಈ ಎಲ್ಲಾ ಭಾಷೆನೂ ಸೇರಿಸಿ ವಿಚಿತ್ರವಾಗಿ ಮಾತನಾಡಿ ಮತ್ತೆ ನಗತೊಡಗಿದ.
ನಾನು ಆ ವ್ಯಕ್ತಿ ಹೇಳಿದ್ದನ್ನ ಕೇಳಿ ತುಂಬಾ nervess ಆದೆ. ಆದ್ರೂ ಅದ್ನ ತೋರ್ಪಡಿಸದೇ ಕೊಪದಿಂದ '' who the hell r u man'' ಅಂತ ಕೂಗಿದೆ ಅದಕ್ಕೆ ಆ ಕಡೆಯಿಂದ ಮೆಲುದನಿಯಲ್ಲಿ '' iam mobile'' ಅಂತ answer ಬಂದು call cut ಆಯ್ತು..
ಅಷ್ಟರಲ್ಲಿ ನನ್ನ ಸದ್ಯೋಗಿಗಳೆಲ್ಲಾ ನನ್ನನ್ನೇ ನೋಡುತ್ತಿದ್ದರು, ನಾನು ಅವರಿಗೆಲ್ಲಾ sorry ಕೇಳಿ, bossಹತ್ರ reqvest ಮಾಡಿ half leave ತಗೊಂಡು ಮನೆಗೆ ವಾಪಾಸ್ಸಾದೆ...

Pactory ಇಂದ ಬೇಗ ಬಂದರೂ ಮನೆಗೆ,
i mean roomಗೆ ಹೋಗಲು ಭಯವಾಗಿ ನನ್ನ ಸ್ನೇಹಿತನೊಬ್ಬನಿಗೆ call ಮಾಡಿ
'ಕಾಮತ್ ಹೋಟೆಲ್' ಗೆ ಬರ ಹೇಳಿ, ಅವನ್ಹತ್ರ ಬೆಳಿಗ್ಗೆಯಿಂದ ಆದ ವಿಷಯವನ್ನೆಲ್ಲಾ ಹೇಳಿದೆ..
ಅವನು ಸಲೀಸಾಗಿ police complent ಕೊಡು ಅಂದ.
ಆದರೆ ನಂಗೆ ಈ ಪೋಲಿಸು ಕೋರ್ಟು ಅಂದ್ರೆ ತುಂಬಾ ಭಯ, ಅದ್ಕೆ ಆ idea ಕೈಬಿಟ್ಟು 'ಬೇರೇ ಏನಾದ್ರೂ ಇದ್ರೆ ಹೇಳು' ಅಂದೆ. ಅದಕ್ಕವನು ತಕ್ಷಣ number change ಮಾಡು ಅಂದ. ಈ idea ನಂಗೂ ಸರಿಯೆನಿಸಿ ಅಲ್ಲಿಂದ ಹೊರಟಾಗ ಮತ್ತದೇ number ಇಂದ msg ಬಂತು.
Bt ಈ ಸಲ ಆ msg ಓದಿ ನನ್ನ ಜೊತೆಗೆ ನನ್ನ friend ಕೂಡ shock ಆದ.....

ಆ ಅಲ್ಲಿ ಈ ಥರ ಬರೆದಿತ್ತು..
Number change ಮಾಡ್ತಿರಾ..? ಮಾಡಿ ಮಾಡಿ, ಎಷ್ಟ್ number change ಮಾಡ್ತೀರಾ.? 10, 20, 50,...
100 number changeಮಾಡಿದ್ರೂ,
'ಮೇ ಆಫ್ ಕೊ ನಹೀ' 'ವಿಡಮಾಟೆ' 'ಚಂಪೈಸ್ತಾನು' 'i w'll eat you' 'ನಿಮ್ಮ ದೇಹವನ್ನು ಕಚ್ಚಿ ಕಚ್ಚಿ ತಿಂದು' 'after than i gonna kill you''..
ಆ msg ಓದಿ ಭಯದಿಂದ ಹೊಟೆಲ್ ನ
A.C room ಅಲ್ಲೂ ಮೈಯೆಲ್ಲಾ ಬೆವರಿನಿಂದ ಒದ್ದೆಯಾಗಿತ್ತು...

To be continued......!

ಗುರುವಾರ, ಅಕ್ಟೋಬರ್ 27, 2011

''...ನನ್ನ ಹನಿಗವನಗಳು...''

1)
''ಹೀಗೂ ಉಂಟೇ ನೋಡಿ
ಒಂದು ಬ್ರೇಕ್ ನ ನಂತರ''

''ಯಾಕೋ ಗೊತ್ತಿಲ್ಲಾ ನನ್ನ
ಮನಸಲ್ಲೇನೋ ಕಾತುರ''

''ಅವಳನ್ನೋಡೊ ಆಸೆ ಹೆಚ್ಚಿಸಿದೆ
ನನ್ನ ಮನದ ಆತುರ''

''ಇಂಥ ಅಪಾಯ ಉಂಟಾಗಲು
ಕಾರಣವೇ ಈ ಅವಸರ''

''ಇಂಥ ಅತೀವೇಗದ ದೇಸೆಯಿಂದಲೇ
ನನ್ನ ಪ್ರೀತಿ ಹೇಳಾಗಿತ್ತು ಹರೋ ಹರ''

''ಅದನ್ನು ತಿಳಿದುಕೊಳ್ಳವ ಮುನ್ನವೇ
ಎದೆಯನ್ನು ಕೆರೆದುಕೊಂಡಾಗಿತ್ತು ಪರ ಪರ''

2)
ನನ್ನ ಈ ಮನದ ಆಗಸದಲ್ಲಿ,,
ಕಹಿ ನೆನಪಿನ ಕಾರ್ಮುಗಿಲು ಕವಿದು..
ಖುಷಿಯ ಕಾಮನಬಿಲ್ಲು ಕಾಣೆಯಾಗಿ,,
ಕಣ್ಣೀರ ಮಳೆಯು ಸುರಿಯುತಿಹುದೆಂದ ಪ್ರದೀಪ....

3)
ಆ ದಿನ ಯಾಕೆ ನೀನಾದೆ ನನ್ನಿಂದ
'ಅಗೋಚರ',
ಅಂದಿನಿಂದ ನನ್ನ ಮನಸಾಗಿದೆ
'ನಿಶಾಚರ',
ಏನೋ ಗೊತ್ತಿಲ್ಲಾ ಕಂಡಿದ್ದೆಲ್ಲಾ ಅನಿಸುತಿದೆ
'ಅಬ್ರಕದಬ್ರ',
ನನ್ನಾಣೆಗೂ ನಿನ್ನ ಪ್ರೀತಿಸುವೆ 'ಇದು ಸತ್ಯ'
ನನ್ನ ಪ್ರೀತಿಯನ್ನು ಕೆಣಕಲು ಯಾರಾದರೂ ಕೇಳಿದರೆ 'ಹೀಗೂ ಉಂಟೇ'..?
'ಕ್ರೈಂಡೈರಿ'ಯಲ್ಲಿ ಅವರ ಕಥಾಯಾಗುತ್ತದೆ
'ಕ್ರೈಂಸ್ಟೋರಿ'


ಹಾಗಂತಾ ನಮ್ಮ ಪ್ರೀತಿನಾ 'ಗಲ್ಲಿ ಗಾಸಿಪ್' ಥರ 'ನೀವು ಹೇಳಿದ್ದು ನಾವು ಕೇಳಿದ್ದು' ಅಂತ
'ಸಿಂಗ್ರಿ ರೌಂಡ್ಸ್' ಗೆ ಬಂದಾಗ ಹೇಳಬಾರದು,
ಇದು ನನ್ನ 'ಕಟ್ಟೆಚ್ಚರ'......


ಆದ್ರೂ ಗೆಳೆಯರೇ ಈ ಪ್ರೀತಿ ಅನ್ನೋದು
'ಜೇಡರ ಬಲೆ' ಅಂದ್ಕೊಂಡಿದ್ದೆ ಆದ್ರೆ ಇದು
'ಚಕ್ರವ್ಯೂಹ' ಅಂತ ಇವತ್ತೇ ಗೊತ್ತಾಗಿದ್ದು....!!!!!!

4)
ದಯವಿಟ್ಟು ಸಾಕು ಮಾಡು ಈ ನಿನ್ನ-ನನ್ನ ಪ್ರಶ್ನೋತ್ತರ...
ನಿನ್ನ ಮುಗ್ಧ ಪ್ರಶ್ನೆಗೆ ನಾನಾಗಿರುವೆ
ಈಗ ನಿರುತ್ತರ...
ನಿನ್ನೀ ಅತಿಯಾದ ಪ್ರೀತಿ, ಕಾಡುತಿದೆ
ನನ್ನ ನಿರಂತರ...
ಆದರೆ ನಮ್ಮಿಬ್ಬರ ನಡುವೆ ಬಂದು ಒಂದು ಮಧ್ಯಂತರ..,
ನಿನ್ನ ಕಳೆದುಕೊಳ್ಳುವ ಭಯದಲ್ಲಿ ನನ್ನ ಮನಸಾಗಿದೆ ತತ್ತರ...

5)
...ಮನಸ್ಸೆಂಬ ಮರುಭೂಮಿಯಲ್ಲಿ ನೀರಿನಂತೆ ಚಿಮ್ಮಿದವಳು ನೀನು...

...ಸುಡುವ ಬಿರುಬಿಸಿಲಲ್ಲೂ ತಂಪಾದ ತಂಗಾಳಿಯಾದವಳು ನೀನು...

...ರಾಗವನ್ನೇ ಮರೆತಿದ್ದ ನನ್ನ ಜೀವನಕ್ಕೆ ನವಪಲ್ಲವಿಯಾದವಳು ನೀನು...

...ಮಂಕಾಗಿದ್ದ ನನ್ನ ಕಲ್ಪನೆಗಳಿಗೆ ಹೊಳಪು ತಂದವಳು ನೀನು...

...ಈ ಕವನದಲ್ಲಿ ಮೂಡಿದ ಪದಗಳಿಗೆ ಸ್ಪೂರ್ತಿಯಾದವಳು ನೀನು...

ಭಾನುವಾರ, ಅಕ್ಟೋಬರ್ 23, 2011

|ನನಗೂ ಒಬ್ಬ ಗೆಳತಿ ಬೇಕು
ಸುಂದರಿಯಲ್ಲದ್ದಿದ್ದರೂ
ಗುಣವಂತೆಯಾಗಿರಬೇಕು
ನನಗೂ ಒಬ್ಬ ಗೆಳತಿ ಬೇಕು|


|ನನ್ನ ಬರಹಕೆ ಸ್ಪೂರ್ತಿಯಾಗಿರಬೇಕು
ನನ್ನಿಂಗಿತವ ಅರಿತುಕೊಳ್ಳಬೇಕು ದೊಡ್ಡವರಿಗೆ ಮರ್ಯಾದೆ ಚಿಕ್ಕವರಿಗೆ
ಪ್ರೀತಿಯ ತೋರಬೇಕು|


|ನನಗೂ ಒಬ್ಬ ಗೆಳತಿ ಬೇಕು|


|ಜೀವನವೆಂದರೇನೆಂದು ಗೊತ್ತಿರಬೇಕು
ಸಹನೆಯ ಅರ್ಥ ತಿಳಿದಿರಬೇಕು
ನನ್ನಂತೆಯೇ ಎಲ್ಲರನ್ನೂ
ನಗಿಸುತಿರಬೇಕು|


|ನನಗೂ ಒಬ್ಬ ಗೆಳತಿ ಬೇಕು|


|ಅವಳ ನೋವನು ನನ್ನಲಿ ಹೇಳಬೇಕು
ನನ್ನಯ ಸುಖವ ಅವಳು ಪಡೆಯಬೇಕು
ನನ್ನೆದೆಯಲಿ ಯಾವಾಗಲೂ
ನಲಿಯುತಿರಬೇಕು|


|ನನಗೂ ಒಬ್ಬ ಗೆಳತಿ ಬೇಕು |


|ಏನೇ ಆದರೂ ಇಬ್ಬರಿಗೂ ತಿಳಿದಿರಬೇಕು
ಅನುಮಾನಕೆ ಕಾರಣ ಮೂಡದಿರಬೇಕು
ನಮ್ಮ ಜೋಡಿ ಬೇರೆಯವರಿಗೆ
ಮಾದರಿಯಾಗಬೇಕು|

|ಅಂತಃ ಗೆಳತಿ ನನಗೆ ಬೇಕು
ಸುಂದರಿಯಲ್ಲದ್ದಿದ್ದರೂ
ಗುಣವಂತೆಯಾಗಿರಬೇಕು
ನನಗೂ ಒಬ್ಬ ಗೆಳತಿ ಬೇಕು|

ಶನಿವಾರ, ಅಕ್ಟೋಬರ್ 15, 2011

('ಪಯಣ' ಚಿತ್ರದ ''ಮೋಡದ ಒಳಗೆ'' ಹಾಡಿನ ಧಾಟಿಯಲ್ಲಿ ನನ್ನ ಕಲ್ಪನೆ)

|ಮೋಹದ ಬಲೆಗೆ ಸಿಲುಕಿಹೆ ನಾನು
ನಿನ್ನ ನೆನೆಯುತಾ ನನ್ನ ಮರೆತೆನು
ನಿಂತಲಿ ನಾನು|

|ಜೀವದ ಗೆಳತಿ ಎಲ್ಲಿಹೆ ನೀನು
ನಿನ್ನ ಹುಡುಕುತಾ ನನ್ನೆ ಕಳೆದೆನು
ಈ ದಿನ ನಾನು|

|ಕಪಟ ತಂತ್ರ ಗೊತ್ತಿಲ್ಲಾ,
ಮೋಸಗಾರ ನಾನಲ್ಲಾ
ನಿನ್ನ ನೆಚ್ಚಿಕೊಂಡಿಹೆ ನಾನು
ಕೇಳೆ ಚಂಚಲಾ..
ನಿನ್ನ ನೆಚ್ಚಿಕೊಂಡಿಹೆ ನಾನು
ಕೇಳೆ ಚಂಚಲಾ.|


|ನಿಂತರೆ ನಿನದೇ ನೆನಪು
ಕುಂತರೆ ನಿನದೇ ಕನಸು
ಏತಕೆ ನನ ಕಾಡಿದೆ
ನಿನ ಕಲರವ ಹೇ.. ಹೆ..|

|ನಾನು ನಿನ್ನ ಮನಸೊಳಗೆ
ನೀನು ನನ್ನ ಎದೆಯೊಳಗೆ
ಇದ್ದರೆ ಈ ಜಗವನೇ ನಾ ಮರೆವೆನು|

|ಕಾದು ಕೂರುವೆ ನಾನು
ಒಮ್ಮೆ ಬಂದು ನೋಡು ನೀನು
ಮತ್ತೆ ಏನೂ ಕೇಳೆನು ನಾನು
ನನ್ನ ಜೀವವೇ
ಮತ್ತೆ ಏನೂ ಕೇಳೆನು ನಾನು
ನನ್ನ ಜೀವವೇ|


|ಮೋಹದ ಬಲೆಗೆ ಸಿಲುಕಿಹೆ ನಾನು
ನಿನ್ನ ನೆನೆಯುತಾ ನನ್ನ ಮರೆತೆನು
ನಿಂತಲಿ ನಾನು|


|ನಾನು ನಿನ್ನ ಮನಸೊಳಗೆ
ಪ್ರೀತಿ ಅರ್ಜಿ ಸಲ್ಲಿಸುವೆ
ಆ ಮನವಿಯ ನೀ ಒಪ್ಪಿಕೊ
ನನ್ನ ಕಾಡದೇ ಹೇ...|

|ನೀನೇ ನನ್ನ ಹಸಿರುಸಿರು
ನನ್ನ ನೀನು ಮರೆಯದಿರು
ನೀ ನಾವಿಕೆ ನನ್ನ ಬಾಳಿಗೆ ಎಂದೆಂದಿಗೂ|

|ನೀನು ಬರದೇ ಬದುಕಿನಲೀ
ನನ್ನ ಜೀವ ಬಾಡುವುದು
ನೀನೇ ನನ್ನ ದೇಹದಲೀ
ಪ್ರಾಣ ಎಂದಿಗೂ
ನೀನೇ ನನ್ನ ದೇಹದಲೀ
ಪ್ರಾಣ ಎಂದಿಗೂ|


|ಮೋಹದ ಬಲೆಗೆ ಸಿಲುಕಿಹೆ ನಾನು
ನಿನ್ನ ನೆನೆಯುತಾ ನನ್ನ ಮರೆತೆನು
ನಿಂತಲಿ ನಾನು|

|ಜೀವದ ಗೆಳತಿ ಎಲ್ಲಿಹೆ ನೀನು
ನಿನ್ನ ಹುಡುಕುತಾ ನನ್ನೆ ಕಳೆದೆನು
ಈ ದಿನ ನಾನು|

|ಕಪಟ ತಂತ್ರ ಗೊತ್ತಿಲ್ಲಾ,
ಮೋಸಗಾರ ನಾನಲ್ಲಾ
ನಿನ್ನ ನೆಚ್ಚಿಕೊಂಡಿಹೆ ನಾನು
ಕೇಳೆ ಚಂಚಲಾ
ನಿನ್ನ ನೆಚ್ಚಿಕೊಂಡಿಹೆ ನಾನು
ಕೇಳೆ ಚಂಚಲಾ|

ಗುರುವಾರ, ಅಕ್ಟೋಬರ್ 13, 2011

''banglore ಹವ್ಯಕ ಹುಡುಗಿಯ ದಿನ-ನಿತ್ಯದ ಗೋಳು''...!!!

ಮನವಿ;;;;-
ಇದು ಎಲ್ಲ ಹವ್ಯಕ ಹುಡುಗಿಯರಿಗೆ ಅಲ್ಲಾ.....

ಇದೊ೦ದು ಕೇವಲ ಕವನ


ಅಪ್ಪಯ್ಯ ನಾನು ನಾಳೆಯಿ೦ದ ಕಾಲೇಜಿಗೆ ಹೋಗ್ತ್ನಿಲ್ಲೆ.
ಎ೦ತ೦ಕ೦ದ್ರೆ ನೀ ಕೊಡು ದುಡ್ದು ನ೦ಗೆ ಸಾಕಾಗ್ತಿಲ್ಲೆ..
ಎಲ್ಲಾ ಹುಡ್ಗೀರು ನಮ್ನ್-ನಮ್ನಿ ಜೀನ್ಸ್ ಟೀಷರ್ಟ್ ಹಾಯ್ಕ೦ಡ್ ಬತ್ತ.
ಆದ್ರೆ ನ್೦ಗ್ ಮಾತ್ರ ಅದೇ ಹಳೇ ಚುಡಿದಾರ ಕುರ್ತಾ.
ಎಲ್ರ ಕೈಲೂ ಈಗ ಹೊಸ-ಹೊಸ i pod mobile ಇರ್ತು
ನನ್ನ್ಹ್ತ್ರ ಮಾತ್ರ ಈಗೂ ಹಳೇ calculator, ಪಟ್ಟಿ,
ಪೆನ್ನು ಇದ್ದು..

ಅಪ್ಪಯ್ಯ ನಾನು.......

ಮನೆಲಿ ದಿನಾ ಅಕ್ಕಿ ತೆಳ್ಳಾವ್ ತಿ೦ದು ಸಾಕಾಗಿ ಹೋತು.
ನ೦ಗೂ ಕೂಡ ಅವ್ರ೦ಗೆ ಪಿಜ್ಜಾ,ಬರ್ಗರ್ ತಿನ್ನವು ಕಾಣ್ತು..
ಪ್ರತಿ-ದಿನ ಬೆಳಿಗ್ಗೆ ಆ ಸೇಟು ಅ೦ಗಡಿ ನೋಡಿ ಬೇಜಾರು ಬ೦ತು..
ನ೦ಗೂ ಅವ್ರ ಜೊತೆಗೆ ಷಾಪಿ೦ಗ್ ಮಾಲ್, ಪಿವಿಆರ್ ಗೆ ಹೋಗಕಾಗ್ತು..

ಅಪ್ಪ ಮಗಳಿಗೆ ಹೇಳ್ತಾನೆ,,

ಮಗಳೇ ಕೇಳೇ ನೀನು ನಾಳೆಯಿ೦ದ ಕಾಲೇಜಿಗೆ ಹೋಗವು ಹೇಳಿಲ್ಲೆ.
ಎ೦ತ೦ಕ೦ದ್ರೆ, ನೀ ಅಲ್ಲಿಗ್ ಹೋಗಿ ಉದ್ದಾರ
ಮಾಡುದು ಎ೦ತೂ ಇಲ್ಲೆ..!!!

ಬುಧವಾರ, ಅಕ್ಟೋಬರ್ 5, 2011

ಬದಲಾದೆ....!

ಬದಲಾದೆ ನಾನೀಗ ಬದಲಾದೆ..
ಮುಂಚಿನಂತಿಲ್ಲ ನಾನಿಗ ಬದಲಾದೆ..

ಅವಳ ಕಣ್ಣ ನೋಟ ನೋಡಿ..
ಅವಳ ಸವಿಮಾತ ಕೇಳಿ..
ನಾನೀಗ ಬದಲಾದೆ..

ಖುಷಿಯಾಗಿ ಆರಾಮಾಗಿ,
ಹಾರಾಡಿಕೊಂಡಿದ್ದೆ ಆಗ ನಾನು..
ಆ ಚಂಚಲೆಯ ನೋಡಿ ನನಗೀಗ,,
ಬೇಡವೆನಿಸುತಿದೆ ಏನೂ..


ಅಂದುಕೊಂಡಿದ್ದೆ ನಾ,
ಎಲ್ಲರಂತಲ್ಲ ಈ ಪುಂಡ..
ಆದರೀಗ ನಾ ಕಾತರಿಸುತ್ತಿರುವೆ
ಆಗಲು ಅವಳ ಗಂಡ..

ಬದಲಾದೆ ನಾನೀಗ ಬದಲಾದೆ,
ಮುಂಚಿನಂತಿಲ್ಲ ನಾನೀಗ ಬದಲಾದೆ..

ಅವಳ ಅಕ್ಕರೆಯ ನೋಡಿ..
ಅವಳ ಮುಗ್ಧತೆಗೆ ಸೋತು..
ನಾನೀಗ ಮನುಜನಾದೆ...

ಮಂಗಳವಾರ, ಅಕ್ಟೋಬರ್ 4, 2011

(ಹುಡುಗರು ಚಿತ್ರದ,
''ನೀರಲ್ಲಿ ಸಣ್ಣ ಅಲೆಯೊಂದು'' ಧಾಟಿಯಲ್ಲಿ ನನ್ನ ಕಲ್ಪನೆ)

ಮನದಲ್ಲಿ ಚೂರು ಅನುಮಾನ ಮೂಡಿ
ದೂರಾದೆ ನೀನು ಆಗ..
ಆ ನಿನ್ನ ಕೋಪ ಆ ನಿನ್ನ ತಾಪ
ಸುಡುತಿಹುದು ನನ್ನಈಗ..

ತುಸು ಪ್ರೀತಿ ಕಾಣಿಸಿ ಕಣ್ಣಲ್ಲೇ ಕೊಂದೆ ನೀ..
ಸವಿಮಾತ ಕೇಳಿಸಿ ಕಾಣದಾದೆಯಾ..


ಮನದಲ್ಲಿ ಚೂರು ಅನುಮಾನ ಮೂಡಿ
ದೂರಾದೆ ನೀನು ಆಗ..
ಆ ನಿನ್ನ ಕೋಪ ಆ ನಿನ್ನ ತಾಪ
ಸುಡುತಿಹುದು ನನ್ನ ಈಗ..


ಕುಂತಲ್ಲೇ ಕೇಳಿಸುತ್ತಿದ್ದೆ
ಈ ನನ್ನ ಎದೆಹಾಡು..
ನೀನೆಲ್ಲೋ ಹೋಗಿರುವಾಗ
ನನಗ್ಯಾಕೆ ಆ ಹಾಡು..?
ಮನಸ್ಸಿನಲ್ಲೇ ನಾನೀಗ
ಬಯಸುತಿಹೆನು ನಿನ್ನ..
ಮರೆಯಲಾರೆ ನಾನಿನ್ನ
ಒಮ್ಮೆ ಬಾರೇ ಚಿನ್ನ..

ಎದೆಯಲ್ಲಿ ಈಗ ನೂರಾರು ಲಹರಿ
ಓಡಾಡುತಿಹುದು ನೊಡು...
ಆಗೊಂದು ಕನಸು ಈಗೊಂದು ನೆನಪು
ಕಾಡುತಿಹುದು ನೋಡು..


ಮನದಲ್ಲಿ ಚೂರು ಅನುಮಾನ ಮೂಡಿ
ದೂರಾದೆ ನೀನು ಆಗ..
ಆ ನಿನ್ನ ಕೋಪ ಆ ನಿನ್ನ ತಾಪ
ಸುಡುತಿಹುದು ನನ್ನ ಈಗ..


ತಲೆಯಲ್ಲಿ ಸಾವಿರಾರು
ಚಿಂತೆಗಳ ಸರಮಾಲೆ..
ಮನಸ್ಸಿದು ಆಗಿದೆ ಇಂದು
ದುಃಖದ ಉಯ್ಯಾಲೆ..

ನೀನೇ ಬಂದು ಮನಸಾರೆ
ನನ್ನ ಸಮಾಧಾನಿಸು..
ಅಷ್ಟೇ ಸಾಕು ಬಾಳಲ್ಲಿ
ಅದೇ ನನ್ನ ಕನಸು..

ನನ್ನ ಚುಚ್ಚಿ ತಿವಿಯೊ ಅ ನಿನ್ನ ಮೌನ
ಯಾಕೀಗ ನೀನೇ ಹೇಳು..
ನಾನೊಂದು ತೀರ ನೀನೊಂದು ತೀರ
ಆಗಿರಬೇಕಾ ಹೇಳು..


ಮನದಲ್ಲಿ ಚೂರು ಅನುಮಾನ ಮೂಡಿ
ದೂರಾದೆ ನೀನು ಆಗ..
ಆ ನಿನ್ನ ಕೋಪ ಆ ನಿನ್ನ ತಾಪ
ಸುಡುತಿಹುದು ನನ್ನ ಈಗ..

ಭಾನುವಾರ, ಅಕ್ಟೋಬರ್ 2, 2011

ತಳಮಳ....

ಕ್ಷಮಿಸಿ...
ಇದು ರೊಮಾಂಟಿಕ್ಕಾ.?ಸೆಂಟಿಮೆಂಟಾ..? ಅಥವಾ ಕಾಮಿಡಿ ನಾ.?
ಅಂತಾ ನಂಗೆ ಗೊತ್ತಾಗಿಲ್ಲಾ..
ಏನೋ ಹೇಳಲು ಹೋಗಿ ಏನೋ ಅಗಿದೆ.. ಸ್ವಲ್ಪಸಹಿಸಿ ಕೊಳ್ಳಿ..!!

ಯಾರಿಗೆ ಹೇಳಲಿ ನನ್ನೀ ತಳಮಳವ...?

ಏನೂ ಹೇಳದ ಅವಳ ಆ ಮೌನ
ನನ್ನ ಕೊಲ್ಲುತಿದೆ..
ಗಡಿಯಾರದಲಿ ಮೂರು ಮುಳ್ಳುಗಳು
ಮೆಲ್ಲಗೆ ಜಾರುತಿದೆ..
ನನ್ನಯ ತಾಳ್ಮೆ ಮಿತಿಯ
ಗಡಿ ದಾಟುತಿದೆ..

ಯಾರಿಗೆ ಹೇಳಲಿ ನನ್ನೀ ತಳಮಳವ...?

ನನ್ನ ಪಾಡಿಗೆ ನಾನು,
ತುಂಬಾ ಆರಾಮಾಗಿದ್ದೆ..
ಎಲ್ಲಿಂದಲೋ ಆಕೆ ಬಂದು,
ಕೆಡಿಸಿದಳು ನನ್ನ ನಿದ್ದೆ..
ಹಗಲಲ್ಲೇ ಕನಸು ಕಾಣುತಾ ನಾ,
ಪ್ರೀತಿಯ ಹಳ್ಳದಲ್ಲಿ ಬಿದ್ದೆ..

ಯಾರಿಗೆ ಹೇಳಲಿ ನನ್ನೀ ತಳಮಳವ..

ಬರೀ ಕನಸು ಕಾಣುವುದರಲ್ಲೇ
ಮುಗಿದ್ಹೋಯ್ತು ಬಾಳು..
ಯಾರೂ ಕೇಳುವವರಿಲ್ಲ,
ನನ್ನಮನದ ಈ ಗೋಳು..
ಹಾಗಾಗಿ ನನಗೀಗ ಅನಿಸುತಿದೆ
ಇಷ್ಟೇನಾ ಬಾಳು..?

ಶನಿವಾರ, ಅಕ್ಟೋಬರ್ 1, 2011

ನನ್ನ ಚೆಲುವೆ....

ಓ ಚೆಲುವೆ.. ಬಾ ಚೆಲುವೆ..ನೀ ನನ್ನೆಡೆಗೆ...
ನೀ ಬರದೆ ನಾನಿಲ್ಲಿ ಇರಲಾರೆನೇ...


ಆ ನಿನ್ನ ನಗುವು ನನ್ನ ಕಾಡುತಿರಲು..

ಆ ಕಣ್ಣ ನೋಟ ನನ್ನ ಕೊಲ್ಲುತಿರಲು..

ನನಗೀಗ ನೀನೇ ಗತಿಯೆಂದು

ನನ್ನ ಮನ ಕೊರಗುತಿಹುದು..


ಓ ಚೆಲುವೆ.. ಬಾ ಚೆಲುವೆ...

ಒಂದು ಸಿಹಿಗನಸು ಬಿದ್ದಂತಾಯ್ತು ನಾ
ನಿನ್ನ ಕಂಡಾಗ..

ನನ್ನ ಹೃದಯ ನಿನ್ನ ಪಾಲಾಯಿತು
ನೀ ಬಂದು ನಿಂತಾಗ..

ನಾ ಮಾಡಿದೆ ನಿನ್ನೆದುರಲಿ ನನ್ನ
ಪ್ರೀತಿಯ ಅಲಾಪನೆ..

ನೀ ಹೇಳದೇ ಏನನ್ನೂ ಮುಗಳ್ನಗುತಾ
ಹೋದೆ ಹಾಗೆ ಸುಮ್ಮನೆ..


ಓ ಚೆಲುವೆ.. ಬಾ ಚೆಲುವೆ...


ಒಮ್ಮೆ ಒಪ್ಪಿಕೊ ನನ್ನೊಲವೇ
ಈ ನನ್ನ ಪ್ರೀತಿಯ..

ಬಚ್ಚಿಟ್ಟು ನಿನ್ನ ಕಾಯುವೆ ನನ್ನೆದೆಯಲಿ
ಓ ನನ್ನ ಹೃದಯ..

ನಾ ಎದುರಿಸುವೆ ನಿನಗಾಗಿ ಭುವಿಯೇ
ತಿರುಗಿ ನಿಂತರೂ..

ಮನಸಾರೆ ನಗುತಿರು ನನ್ನ ನೋಡಿ
ನೀ ಹಾಗೆ ಸುಮ್ಮನೆ..


ಓ ಚೆಲುವೆ.. ಬಾ ಚೆಲುವೆ..ನೀ ನನ್ನೆಡೆಗೆ...
ನೀ ಬರದೆ ನಾನಿಲ್ಲಿ ಇರಲಾರೆನೇ...

ಆ ನಿನ್ನ ನಗುವು ನನ್ನ ಕಾಡುತಿರಲು..

ಆ ಕಣ್ಣ ನೋಟ ನನ್ನ ಕೊಲ್ಲುತಿರಲು..

ನನಗೀಗ ನೀನೇ ಗತಿಯೆಂದು

ನನ್ನ ಮನ ಕೊರಗುತಿಹುದು..

ಮಂಗಳವಾರ, ಸೆಪ್ಟೆಂಬರ್ 27, 2011

''ನಾ ಕಂಡ ಮಳೆಗಾಲದ ಒಂದು ದಿನ''

ಇದು ಮಳೆಗಾಲದಲ್ಲಿ ಒಂದು ದಿನ ನಾನು ಹಾಗು ನನ್ನ ಗೆಳೆಯ ಮಾಡಿದ ಪ್ರಯಾಣದ ನಡುವೆ ಆದ ಪ್ರಯಾಸದ ಕಥೆ- ವ್ಯಥೆ.!

ಅದು 2009ರ ಜೂನ್ ಮಾಸ...
ವರುಣದೇವ allraedy ತನ್ನ bating ಶುರು ಹಚ್ಕಂಡು ಕೆಲವೊಂದು ಊರಿನಲ್ಲಿ 4's, 6's ಹೊಡ್ದಾಗಿತ್ತು..!

ಅಂತ ಸಮಯದಲ್ಲಿ ನಾನು ಹಾಗು ಮಹೇಶ(my frnd) 'herohonda-splender' bike ತಗೊಂಡು ಹೊನ್ನಾವರದಿಂದ ಯಲ್ಲಾಪುರಕ್ಕೆ ಹೊರಟೆವು...

ನಮ್ಮ ಅದ್ರಷ್ಟಕ್ಕೆ ಈ ದಿನ ಮಳೆಯಿಲ್ಲವೆಂದು ಸಂತಸದಿಂದಲೇ ಹೊರಟ್ವಿ..
But ನಮ್ಮ ಅಲ್ಪಕಾಲದ ಸಂತಸ ನೋಡಿ ವರುಣದೇವ ಮನದಲ್ಲೇ ನಗ್ತಿರೋದು ನಮಗೆ ಗೊತ್ತಾಗಲೇ ಇಲ್ಲಾ....!!

ನಾವು ಹೊನ್ನಾವರ ಸನಿಹದಲ್ಲೇ ಇರುವ ನಮ್ಮೂರು ಅಪ್ಸರಕೊಂಡದಿಂದ ಹೊರಡುವಾಗ ಸಮಯ ಬೆಳಗ್ಗಿನ 8:30 ರ ಆಸುಪಾಸು....
ನಾವು ಹೊರಡುವಾಗೇನೋ ಖುಷಿಯಿಂದಲೇ ಹೊರಟ್ವಿ ಆ......ದ.....ರೆ......,,,???

oh sory ನಾವು ಯಲ್ಲಾಪುರಕ್ಕೆ ಹೊರ್ಟಿದ್ದು ನನ್ frnd ನ ತಾತನಿಗೆ ಹುಷಾರಿಲ್ಲಾಂತ ನೋಡ್ಕೊಂಡು ಬರೋಕೆ... but ಅಲ್ಲಿಂದ ವಾಪಾಸ್ ಬರೋದಿರ್ಲಿ, ಯಲ್ಲಾಪುರಕ್ಕೆ ಹೋಗಿಮುಟ್ತೀವಾ ಅಂತ ನಾವು ಸಾಗಿದ ದಾರಿಯಲ್ಲಿ ಭಯಮಿಶ್ರಿತ ಅನುಮಾನ ಮೂಡಿತ್ತು....!

ಅಂದು ನಾವು ಹೊರಟ ಗಳಿಗೆ ಸರಿಯಿರ್ಲಿಲ್ಲ ಅನ್ಸುತ್ತೆ..!
ಯಾಕಂದ್ರೆ ನಾವಿನ್ನೂ 1km ಹೋಗಲಿಲ್ಲ,, ಅಷ್ಟರಲ್ಲಿ ಒಬ್ಬ ವ್ಯಕ್ತಿ ನಮ್ಮ ಬೈಕಿಗೆ ಅಡ್ಡ ಬಂದು ಸ್ವಲ್ಪದರಲ್ಲಿ ಆಕ್ಸಿಡೆಂಟ್ ಆಗೋದು ತಪ್ಪಿತು....
ನಮ್ಮಿಬ್ಬರಿಗೂ ಈ ತರಹದ (ಅಪ)ಶಕುನದಲ್ಲಿ ನಂಬಿಕೆ ಇಲ್ಲದ್ದಿದ್ದರಿಂದ ನಮ್ಮ ಪಯಣ continue ಆಯ್ತು..

ಹಾಗೇ ಮುಂದೆ ಸಾಗಿ ಕುಮಟಾ ಸನಿಹದ
''ಹೊನ್ಮಾವು cross'' ಬಳಿ tea ಅಂಗಡಿ ಪಕ್ಕ ನಮ್ಮ ''ಐರಾವತ''ವನ್ನು ನಿಲ್ಲಿಸಿ, '2 ಟೀ 2 ಬನ್ನು ಕೊಡಣ್ಣಾ' ಅಂತಾ ಹೇಳಿ, ಹೊರಗಡೆ ಇಟ್ಟಿದ್ದ ನೀರಿನಲ್ಲಿ ಮುಖ ತೊಳೆಯುತ್ತಾ ಇಲ್ಲಿಂದ ಎಲ್ಲೂ ನಿಲ್ಲದೇ ಸೀದಾ ಮಹೇಶನ ಪರಿಚಯದವರ ಮನೆಗೆ ಹೋಗುವ plan ಮಾಡುತ್ತಿರುವಾಗಲೇ,
'ಟಪಕ್' ಅಂತ ಒಂದು ಮಳೆ ಹನಿಯೊಂದು ನೀರಿನಲ್ಲಿ ಬಿತ್ತು....

(ಇನ್ನೊಂದು ವಿಷಯ ನಮ್ಮ ಹತ್ರ ಎಷ್ಟೇ ದುಡ್ಡಿದ್ರೂ, ಎಷ್ಟೇ ದೊಡ್ಡ ಹೋಟೆಲ್ಲಿಗೆ ಹೋಗಿ ತಿಂದ್ರೂನು, ಈ ಟೀ with ಬನ್ನಿನ ತರ ಆಗಲ್ಲಾ ಏನಂತೀರಾ....??)

ಟೀ ಕುಡ್ದಾಯ್ತು ಮಹೇಶ ಒಂದಿಷ್ಟು ಗುಟ್ಕಾ ಪ್ಯಾಕ್ ತಗೊಂಡ,
ಅಲ್ಲೇ ಪಕ್ಕದಲ್ಲಿ ನಮ್ಮ ''natural call'' ಮುಗಿಸಿ, 'raincot' ಧರಿಸಿಕೊಂಡು ಮುಂದೆ ಹೋದೆವು..

But ಅಲ್ಲಿಂದ ನಾವು 'ಕುಮಟಾ ಟೆಂಪೊ ಸರ್ಕಲ್' ದಾಟುತ್ತಿದ್ದಂತೆ, ''ತಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿ ಕೈಕೊಟ್ಟು ಹೋದಳೇನೋ'' ಎಂಬಂತೆ,
'ವರುಣದೇವ' ಗಳಗಳನೆ ಅಳಲು ಆರಂಭಿಸಿದ...!
ಆ ಕಣ್ಣೀರು ಮರುದಿನ ನಾವು ಮನೆಗೆ ಬಂದು ಮುಟ್ಟಿದ್ರೂ ಕಮ್ಮಿಯಾಗಿರಲಿಲ್ಲ...!

ನಮಗೆ ಆ ಕಣ್ಣೀರು ಮೊದಮೊದಲು ಪನ್ನೀರಿನಂತೆ ಭಾಸವಾಯಿತು..
ನಂತರದ ಕೆಲವೇ ತಾಸಲ್ಲಿ ನಮ್ಮ ಕಣ್ಣಲ್ಲೇ ನೀರು ಬರುವಂತಾಗಿತ್ತು...!

ಮುಂದೆ ಹೋಗ್ತಾ ಹೋಗ್ತಾ ಮಳೆಯ ರಭಸ ಜೋರಾಗತೊಡಗಿತು..
ಮಳೆ ಹನಿಯು ಭೂಮಿಯ ಮೇಲಿನ ಕೋಪವನ್ನು ನಮ್ಮೇಲೆ ತೋರುತ್ತಾ, ಮುಖದ ತುಂಬಾ 'ರಪರಪನೆ' ಭಾರಿಸತೊಡಗಿತು..
ಮಹೇಶ ಹೆಲ್ಮೇಟಿನಿಂದ,
ನಾನು ಕನ್ನಡಕ ಹಾಗು ಒಂದು ಕರವಸ್ತ್ರದಿಂದ ನಮ್ಮ ಮೂತಿಯನ್ನು ಆದಷ್ಟು ರಕ್ಷಿಸಿಕೊಳ್ಳುವುದಕ್ಕೆ ಪ್ರಯತ್ನ ಪಡ್ತಾ ಇದ್ವಿ..
bt no use ನಾನು ಹಾಕ್ಕೋಂಡಿದ್ದ raincot ಹಳೇದ್ದಾದ್ದರಿಂದ ಒಳಗೆ ಮಳೆನೀರು ಹೋಗಿ shirt ಒದ್ದೆಯಾಗಿ body ಲಿ ಲೈಟಾಗಿ ಕುಳುಕುಳು ಅನ್ನೋಕೆ start ಆಯ್ತು..!!


ಮಳೆ ಜೋರಾದ ಕಾರಣ ಮಹೇಶ, ಜಾಸ್ತಿ ಸ್ಪೀಡಿಲ್ಲದೇ '30-40kms/h' ವೇಗದಲ್ಲಿ ನಮ್ಮ ಐರಾವತವನ್ನು ಚಲಾಯಿಸುತ್ತಿದ್ದ..!
ನಾನು 'ಚಿನ್ನದ ತಾರೆ ಗಣೇಶ್' ಸ್ಟೈಲಲ್ಲಿ ಮಳೆಗೆ ಹಿಡಿಶಾಪ ಹಾಕುತ್ತಾ, ಅದು ಇದು ಕಷ್ಟಸುಖ ಮಾತಾಡ್ತಾ, ಅವನನ್ನು ನಗೀಸ್ತಾ ಇದ್ದೆ..
ಹಾಗೆ 'kms board' ಗಳನ್ನು ಎಣಿಸುತ್ತಾ ಅಘನಾಶಿನಿ ನದಿಯ ಬ್ರಿಡ್ಜ್ ಬಳಿ ಬಂದಾಗ, ಮಹೇಶ,,
''ಒಂದೇ ನಿಮಿಷಕ್ಕೇ ಸ್ವರ್ಗಕ್ಕೆ ಹೋಗೋ ಆಸೆ ಇದ್ಯಾ ಅಂತ ಕೇಳ್ದಾ''
ನಾನು ಅವನ ಮಾತನ್ನು ಅರ್ಥೈಸಿಕೊಂಡು,,
''ಗಾಡಿ ನಿಂದು ಗಾಡಿ ಓಡಿಸ್ತಿರೋ body ನಿಂದು ನೀ ಎಲ್ಲಿಗೆ ಹೋಗ್ತ್ಯೋ ಅಲ್ಲಿಗೆ ನಾನು ಬರ್ತಿನಿ..!''
ಅಂತ ಫಿಲ್ಮಿ ಸ್ಟೈಲಲ್ಲಿ ಹೇಳಿದಾಗ,,
ಮಹೇಶ ದೊಡ್ಡದಾಗಿ ಸ್ಮೈಲಿದ..
ಅವನು ಹಾಗೆಹೇಳಲು ಕಾರಣವಿತ್ತು.. ದಿನದಿಂದ ಸತತವಾಗಿ ಮಳೆ ಬಿದ್ದ ಕಾರಣ,, ಅಘನಾಶಿನಿ ನದಿ ಅಪಾಯದ ಮಟ್ಟಕ್ಕೆ ಮಟ್ಟಕ್ಕೆ ಮೀರಿ ಹರಿಯುತ್ತಿತ್ತು..

ಹಾಗೆ ಆ ಬ್ರಿಡ್ಜ್ ದಾಟಿ ಸ್ವಲ್ಪದೂರ ಹೋಗಿದ್ವಿ..
ಅಷ್ಟರಲ್ಲಿ ಎದುರಿಗೆ ಒಂದು 'tata sumo' ನಿಧಾನವಾಗೇ ಬರ್ತಾ ಇತ್ತು,,
ನಾವು ನಮ್ಮ left ಗೆ,
sumoದವನು ಅವನ left ಗೆ
ಅರಾಮಾಗಿ ಬರ್ತಿದ್ದಾಗ,
roadನ ಆ ಪಕ್ಕದಲ್ಲಿದ್ದ ಹಸು ಒಂದನ್ನು ನೋಡಿ 'tata sumo'ದ driver,
'horn' ಅದುಮಿದ..
ಅಚಾನಕ್ಕಾಗಿ ಆದ soundನ್ನು ಕೇಳಿ ಆ ಹಸು ಬೆದರಿ road ಕಡೆಗೇ ಓಡಿಬಂತು.. ಮಳೆ ಬೀಳುತ್ತಿದ್ದ ಕಾರಣ roadಲ್ಲಿ ನೀರು ನಿಂತಿತ್ತು.
ಆ ನೀರಿನ ಮೇಲೆ ಕಾಲಿಟ್ಟ ಹಸು ಆಯತಪ್ಪಿ ಜಾರಿಕೊಂಡು ನಮ್ಮ ಕಡಗೇ ಬಂದಾಗ,, ನಮ್ಮಿಬ್ಬರ ಎದೆಯಲ್ಲಿ ನೀರೊಣಗಿ,,
ನಾನು ''ಏಯ್.. ಏಯ್.. ಏಯ್..''
ಅಂದೆ ಅಷ್ಟರಲ್ಲಿ,,,,??

To be continued...
(ಹುಡುಗರು ಚಿತ್ರದ ''ಶಂಭೊ ಶಿವ ಶಂಭೊ'' ಹಾಡಿನ ಧಾಟಿಯಲ್ಲಿ ನನ್ನದೊಂದು ಪ್ರಯತ್ನ)

||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

||ದೇಶವ ನಾಶ ಮಾಡಲು ಹೊರಟ..
ದುಷ್ಟರ ಕೈಗೆ ಮಾರಲುಹೊರಟ..
ಇಂತಹ ಕ್ರಿಮಿಗಳ ವಿರುದ್ಧ ನಾವು
ತಿರುಗಿ ನಿಲ್ಲೋಣ..||

||ಭಾರತ ಮಾತೆಯ ಮಕ್ಕಳು ನಾವು..
ಅವಳ ಸೇವೆಗೆ ಸಿದ್ಧರು ನಾವು..
ನಮ್ಮಯ ಪ್ರಾಣ ದೇಶಕೆ ಮುಡಿಪು..
ಅಂಜಿಕೆ ನಮಗ್ಯಾಕೆ..||

||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

||ನಾವೇನೂ ಮೂರ್ಖರಲ್ಲಾ..
ಹಿಂಸೆನಾ ಸಹಿಸೊದಿಲ್ಲಾ..
ತಾಳ್ಮೆ ಕಳ್ಕೊಂಡ್ರೆ ನಾವು..
ನಿಮ್ಗೆಲ್ಲೂ ಉಳಿಗಾಲವಿಲ್ಲಾ..||

||ಗಾಂಧೀಜೀ ತತ್ವಬೋಧ..
ನಿಮ್ಗೀಗ ಸಾಕಾಗಲ್ಲಾ..
ನಿಮ್ಗೇನಿದ್ರೂ ಬೇಕು ಈಗ..
ಕಂಡಲ್ಲಿ ಗುಂಡಿನ ಪ್ರಯೋಗ..||

||ಯಾರೀಗೂ ಹೆದ್ರೊದಿಲ್ಲಾaaaaa
ನಾವೆಲ್ಲಾ ಒಂದೇ ಕುಲaaaaa
ಯಾರೀಗೂ ಹೆದ್ರೊದಿಲ್ಲಾ
ನಾವೆಲ್ಲಾ ಒಂದೇ ಕುಲ
ಭಾರತ ಮಾತೆಯ ಸುಪುತ್ರರು....||

||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

||ದೇಶವ ನಾಶ ಮಾಡಲು ಹೊರಟ..
ದುಷ್ಟರ ಕೈಗೆ ಮಾರಲುಹೊರಟ..
ಇಂತಹ ಕ್ರಿಮಿಗಳ ವಿರುದ್ಧ ನಾವು
ತಿರುಗಿ ನಿಲ್ಲೋಣ..||

||ಭಾರತ ಮಾತೆಯ ಮಕ್ಕಳು ನಾವು..
ಅವಳ ಸೇವೆಗೆ ಸಿದ್ಧರು ನಾವು..
ನಮ್ಮಯ ಪ್ರಾಣ ದೇಶಕೆ ಮುಡಿಪು..
ಅಂಜಿಕೆ ನಮಗ್ಯಾಕೆ..||

||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

ಓಓಓಹೋಓ

||ಬೆನ್ನಿಗೆ ಚಾಕೂ ಹಾಕೊ ಕೆಲಸಾನ
ಮಾಡೋರು ನೀವು..
ನ್ಯಾಯ ನೀತಿ ನಂಬೊ
ದೇಶಭಕ್ತರು ನಾವು..
ದೇಹಿ ಅಂತಾ ಬಂದೊರು
ವೈರಿನೇ ಆದ್ರೂ ಕೂಡ..
ಉಪಚಾರ ಮಾಡಿ ಸಾಕಿ..
ಸಲುಹಿದೋರು ನಾವು..||

||ವಂದೇ ಮಾತರಂ ಅನ್ನೊ ಘೋಷaaa..
ಅದೇ ನಿಮ್ಗೆ ನೇಣಿನ ಪಾಶaaa aaa..
ವಂದೇ ಮಾತರಂ ಅನ್ನೊ ಘೋಷ..
ಅದೇ ನಿಮ್ಗೆ ನೇಣಿನ ಪಾಶ..
ಜೀವದ್ಮೇಲೆ ಆಸೆ ಇದ್ರೆ ತೊಲಗಿರಿ..||



||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

ಮಾತರಂ ಮಾತರಂ ವಂದೇಮಾತರಂ..
ಮಾತರಂ ಮಾತರಂ ವಂದೇಮಾತರಂ..
ಮಾತರಂ ಮಾತರಂ ವಂದೇಮಾತರಂ..
ವಂದೇಮಾತರಂ.....

||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

||ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..
ಬನ್ನಿ ಹೊರಬನ್ನಿ ಎಲ್ಲರೂ ಬನ್ನಿ..||

ಸೋಮವಾರ, ಸೆಪ್ಟೆಂಬರ್ 26, 2011

(''ಪರಮಾತ್ಮ'' ಚಿತ್ರದ
''ಹೆಸರು ಪೂರ್ತಿ ಹೇಳದೇ''
ಧಾಟಿಯಲ್ಲಿ ನನ್ನದೊಂದು ಪ್ರಯತ್ನ)


||ಮನಸು ಮಾಯವಾಗಿದೆ ನಿನ್ನ ನಾನು ನೋಡದೇ...
ನನ್ನ ನಾನೇ ಮರೆತೆನೇ ನಿನ್ನ ದನಿಯ ಕೇಳದೇ...
ಎಲ್ಲಿ ಅಂತಾ ಹುಡುಕಲಿ ನಿನ್ನ ನಾನೀಗ...||

||ಮನವಿದು ಅಳುತಿದೆ ನೋಡೇ
ನೆನೆಯುತಾ ನಿನ್ನನ್ನೇ...

ಹೃದಯವು ಬಯಸಿತು ಈಗ
ನಿನ್ನಯ ನೆನಪನ್ನೇ...||

||ಮನಸು ಮಾಯವಾಗಿದೆ ನಿನ್ನ ನಾನು ನೋಡದೇ...
ನನ್ನ ನಾನೇ ಮರೆತೆನೇ ನಿನ್ನ ದನಿಯ ಕೇಳದೇ...
ಎಲ್ಲಿ ಅಂತಾ ಹುಡುಕಲಿ ನಿನ್ನ ನಾನೀಗ...||


||ನಿನ್ನ ಮೊಗದ ನಸುನಗುವೇ ನನ್ನೆದೆಯ ಹಾಡಾಗಿತ್ತು...

ನನ್ನ ಕಣ್ಣು ನಾಚುತ್ತಿತ್ತು ಮುತ್ತಿಡಲು
ನೀ ನನ್ನ ತುಟಿಗೆ...||

||ನಿನ್ನ ನೋಡೊ ಮುಂಚೆ ನಾ
ಸ್ವಲ್ಪ ಒರಟ ಆಗಿದ್ದೆ...

ಈಗ ನಂಗೆ ಅನಿಸಿದೆ ನಂಗೂ
ಒಂದು ಮನಸಿದೆ...

ನಂಗೆ ಏನೋ ಆಗಿದೆ
ನೋಡು ನೀ ಈಗಲೇ...||

||ನಿನ್ನ ಮುದ್ದು ಮಾತಲ್ಲಿದೆ
ಅತಿಯಾದ ಆಕರ್ಷಣೆ....

ಪದವಿಲ್ಲದಂತಾಯಿತು ನನ್ನ ಮನದಲಿ
ನಾ ನಿನ್ನ ಹೊಗಳಲು....||


||ತುಂಬಾ ನೋವು ಆಗಿದೆ
ಒಮ್ಮೆ ಕಾಣಬಾರದೇ...

ನನ್ನ ಮತಿಯು ಕೆಡುತಿದೆ ನನಗೆ
ನೀನು ಸಿಕ್ಕದೇ...

ನಿನ್ನ ನೆನಪಲಿ ನೆನೆಯುತಾ
ಸತ್ತುಬಿಡಲೇ...?||

ಶನಿವಾರ, ಸೆಪ್ಟೆಂಬರ್ 24, 2011

@/''ಮುಖಪುಸ್ತಕದ ಲೈಫು ಇಷ್ಟೆನೇ''\@


''ನಮಗೆ ಮರುನಾಮಕರಣ ಮಾಡೊ
profileಗಳು''...!


''ನಮ್ಮ ಮೂತಿ ಕಾಣಿಸೊ
profile imageಗಳು''...!


''ನಮಗೆ ಕಾಟ ಕೊಡಲು ಬರುವ
frnd accpectಗಳು''...!


''ಇನ್ನೊಬ್ಬರಿಗೆ ನಾವು ಕಾಟ ಕೊಡಲೆಂದೇ ಇರುವ frnd reqvestಗಳು''...!


''ಕ್ಯಾಕರಿಸಿಉಗಿಯಲು ಮತ್ತು ಉಗಿಸಿಕೊಳ್ಳಲು
ಇರುವwallಗಳು''...!


''ನಮ್ಮ ಹಣೆಬರಹವನ್ನು ನಾವೇ ತಿದ್ದಿ ಬರೆದಿರುವ
imfoಗಳು''...!


''ಕಣ್ಣಿಗೆ ಕಾಣದ್ದನ್ನು ಪದೆ ಪದೆ ತೋರಿಸುವ
photosಗಳು''...!


''Hy helow hw r u ಅಂತ ವಿಚಾರಿಸೊ
msgಗಳು''...!


''Iam fine thnk u ಅನ್ನೊ rplyಗಳು''...!


''ಇಷ್ಟವಾಗದವರನ್ನು ದೂರ ಮಾಡೊ unfrndಗಳು''...!


''ಮನಸ್ಸಲ್ಲಿ ಭಾವೈಕ್ಯತೆ,ಗೊಂದಲ,ಅಸಹ್ಯ ಹಾಗು
ದ್ವೇಷ ಮೂಡಿಸೊ groupಗಳು''...!


''ರೂಲ್ಸ್ ರೂಲ್ಸ್ ಅಂತಾ ರಾರಾಜಿಸುವ
group discrptionsಗಳು''...!


''ನಾವೆಲ್ಲರೂ ಒಂದೇ ಎಂದು ಮೆರೆಯುವ
membersಗಳು''...!


''ಎಲ್ಲರೂ ಬಂದು ಸೇರಿ ಎಂದು ಕರೆಯುವ
Add membersಗಳು''...!


''ಯಾರೂ ಬೇಡವೆನಿಸಿದಾಗ ಏಕಾಂಗಿ ಹೋರಾಟಕ್ಕೆ ಸಹಕರಿಸೋ
Leave groupಗಳು''...!


''ನಮಗೆ ತಿಳಿದ ಹಾಗು ತಿಳಿಯದ ವಿಷಯವನ್ನು
ಚರ್ಚಿಸಲು ಇರೋ postಗಳು''...!


''ಅದಕ್ಕೆ ಉತ್ತರವಾಗಿ ಬರೋ comentಗಳು''...!


''ನನ್ನದೊಂದು ಎಲ್ಲಿ ಇಡ್ಲಿ ಅನ್ನೊ
Re comentಗಳು''...!


''ಅಭಿಪ್ರಾಯ ಉತ್ತಮವಾಗಿದೆ ಅಂತ
ಹೇಳೋಕೊಂದುlikeಗಳು''...!


''ನಿದ್ದೆಯಲ್ಲಿದ್ದವರನ್ನು ಎಚ್ಚರಿಸುವ ಅಲರಾಂನಂತೆ ಅವಾಗವಾಗ ಅಭಿಮತ ತಿಳಿಯಲು
ಗೊಚರಿಸುವNotificationಗಳು''...!


''ಕುಂತಲ್ಲೆ ಜಗತ್ತನ್ನು ಸುತ್ತಿಸುವ ವಿಧ ವಿಧ
linkಗಳು''...!


''ಮೋಸ ಮಾಡಲೆಂದು ಬರುವ
fake profileಗಳು''...!


''ಬೇರೆಯವರ ಹೆಸರಲ್ಲಿ chat ಮಾಡೋ
'ವಿಕೃತ ಮನಸ್ಸಿನ'cheef mentalityಗಳು''...!


''ಹಿತಕರವಾದ online fb chatಗಳು''...!


''ಮಧುರ ಭಾವನೆ ಮೂಡಿಸುವ,,
lovestoryಗಳು''...!


''ಅನಾವಶ್ಯಕ ಎನಿಸೋ
love biuldupಗಳು''...!


''ಅವಸರದಲ್ಲಿ ಆಗೋ
love breakupಗಳು''...!


''ಒಟ್ಟಿನಲ್ಲಿ Time passಗೆ ಹೇಳಿ ಮಾಡಿಸಿದ
ಜಾಗಗಳು''...!


''ಈ 'Facebook'ಎಂಬ
'ಸ್ನೇಹಲೋಕ'ಗಳು''......!!



Dis is lifestyle of facebook..!!;)

ಗುರುವಾರ, ಸೆಪ್ಟೆಂಬರ್ 22, 2011

(ಯೋಗರಾಜ್ ಭಟ್ ಅವರ ''ಯಾರಿಗೆ ಹೇಳೋಣ'' ಹಾಡಿನ ಧಾಟಿಯಲ್ಲಿ ನನ್ನ ಕಲ್ಪನೆ...
ಇದು ನನ್ನ ಪ್ರಥಮ ಪ್ರಯತ್ನ ತಪ್ಪಾದಲ್ಲಿ ಮನ್ನಿಸಿ..)

ಏನು ಕೆಲಸ ಇಲ್ದೇ ನಾ ಸುಮ್ನೆ ಕೂತಿದ್ದೆ..
ಹೊತ್ತು ಹೋಗಲ್ಲಾಂತ ನಾ ಲವ್ವಲ್ಲಿ ಬಿದ್ದೆ..
ಕತ್ತೆತ್ತಿ ನೋಡಿದಾಗ ತುಂಬಾ ಆಳಕ್ಹ್ಕೋಗಿದ್ದೆ..
ಇದೆಲ್ಲಾ ನಂಗೆ ಬೇಕಿತ್ತಾ ಅಂತ ಚಿಂತೆಲಿ ಬಿದ್ದೆ..
ಏನೇ ಆದ್ರೂನು, ನಾ ಹೇಗೆ ಅದ್ರೂನು,
ಅಲ್ಲಿಂದ ಬರೋಕೆ ತುಂಬಾ ಟ್ರೈ... ಮಾಡ್ದೆ.. ತಪ್ಪಿಸ್ಕೊಳೊಕೆ ಆಗ್ದೆ ನಾನು ಸೋತೋದೆ...

ಥೂ....!

ಏನು ಕೆಲಸ ಇಲ್ದೇ ನಾ ಸುಮ್ನೆ ಕೂತಿದ್ದೆ..
ಹೊತ್ತು ಹೋಗಲ್ಲಾಂತ ನಾ ಲವ್ವಲ್ಲಿ ಬಿದ್ದೆ..

ತುಂಬಾ ಗ್ರೇಟು ಪೋರ ಅಂತ ಅಂದ್ಕೊಂಡಿದ್ದೆ ನಾನು ಈ ಪ್ರೀತಿ ಹುಟ್ಟೊ ಮೊದ್ಲು..
ಆದ್ರೆ ಪಕ್ಕದ್ಮನೆ ಹುಡುಗಿಯೊಬ್ಬಳು ಹಾರ್ಟು ಸೇಲಾಗೋ ಥರ ಹಾಯ್ ಅಂದ್ಬಿಟ್ಳು..
ಏನಾಯ್ತು ಅಂತ ಗೊತ್ತಾಗೋ ಮೊದ್ಲೆ,, ಎಲ್ಲಿ ಬಿದ್ದೆ ಅಂತ ತಿಳಿಳೇ ಇಲ್ಲಾ...
I love u ಅಂತಾ ಹೇಳೋಣಾಂದ್ರೆ ಧೈರ್ಯ ಕೂಡ ಕೈ ಕೊಡ್ತಲ್ಲಾ..
ಆದ್ರೆ ನಾನು ಅವ್ಳಿಗೆ love uuuuu ಅಂತಾ ಹೇಳ್ದಾಗ್ಲೆಲ್ಲಾ.,
ಅವ್ಳು cho chweet ಅಂತ ಮುಖ ಸವರಿ ಹೋಗ್ತಾಳಲ್ಲಾ...?!



ಏನ್ ಮಾಡ್ಲಿ ನನ್ ಲವ್ ಮ್ಯಾಕ್ಸಿಮಮ್ಮು..
butನಾನು ಕೊಟ್ಟಿಲ್ಲ ಅವ್ಳಿಗೆ ಯಾವ ಪ್ರಾಬ್ಲಮ್ಮು..

ಅವ್ಳು ಸಿಕ್ಕಿದ್ಳು'facebook'ಅಲ್ಲಿ, 'frnd reqvest'ಕಳಿಸಿಕೊಂಡು
ನಾನು ಕ್ಲೋಸಾದೆ..
ಇಬ್ರೂ ಗುರ್ತು ಪರಿಚಯ ಮಾಡಿಕೊಂಡು, Chatನಲ್ಲೇ ಕಷ್ಟಸುಖ ಮಾತಾಡ್ತಾ ಇದ್ವಿ..
ಆದ್ರೊಂದಿನ ಅವ್ಳಣ್ಣ ಅವ್ಳ'cell'ಅಲ್ಲಿ ನನ್ ನಂಬರ್ರ್ ನೋಡೆಬಿಟ್ಟ..
ಅವ್ಳತ್ರ'cell'ಕಿತ್ಕೊಂಡು ಅದ್ರಿಂದ್ಲೇ ನಂಗೆ ಅವಾಜು ಹಾಕ್ದ..
ಈ ಸಲಾನೂ ನನ್ ಲವ್ ಮತ್ತೆ ಯೆ..ಕ್ಕು..ಟ್ಟಿ ಹೋಯ್ತಲ್ರೀ..
Sorry ಅವ್ಳ ಹೆಸ್ರು ಈಗ ನಂಗೆ ನೆನಪಿಗೆ ಬರ್ತಿಲ್ವಲ್ರೀ..!

ಯಾವ ಹುಡ್ಗೀನೂ ನಂಗೆ ಸಿಗ್ತಾನೇ ಇಲ್ಲಾ..
ನಾನೇನ್ಮಾಡ್ಲಿ ಅಂತಾನೂ ಗೊತ್ತಾಗ್ತಾ ಇಲ್ಲಾ..

ಲಾಲ್ ಭಾಗಿನಲ್ಲಿ ಒಮ್ಮೆ ನಾನು ಅವಳನ್ನ ನೋಡಿ ಲೈಟಾಗಿ ಹಾಳಾಗ್ಹೋದೆ...
ಮನಸಲ್ಲಿ ಆಸೆ ಹುಟ್ಟಿ ಅವ್ಳಿಗೆ ಗುಲಾಬಿ ಕೊಟ್ಟು i love you ಅಂದೆ..

ಅವ್ಳು ಅದ್ನ ಕೋಪದಿಂದ ನೋಡಿ, ಆ ಹೂವನ್ನ ಎಸೆದೇ ಬಿಟ್ಳು..
ನನ್ನಣ್ಣಂಗೆ ಹೇಳಿ ನಿನ್ನ ಕೈಕಾಲು ಮುರೀಸ್ತಿನಿ ಅಂದ್ಳು...
ನಾನು ಅವಳಿಗೆ ಕೈಮುಗಿದು ಬೇಡ್ಕೊಂಡ್ಬಿಟ್ಟೆ ಕಣ್ರೀ..!
ಇಲ್ದಿದ್ರೆ ನನ್ನ ''ಎಮ್ಮೆಮ್ಮು'' ಹಾಳಾಗ್ಹೋಗ್ತಿತ್ತು ನೋಡ್ರಿ...!

ಏನು ಮಾಡೋದು ನನ್ನ ಲೈಫು ಇಷ್ಟೇನೆ...!
ಹುಡ್ಗೀರ ಸಬ್ಜೆಕ್ಟಲ್ಲಿeeeee
ನಂಗೆ ಸೊನ್ನೇನೆ...!!

ಮಂಗಳವಾರ, ಸೆಪ್ಟೆಂಬರ್ 20, 2011

ಶರಣಾದೆ ಶರಣಾದೆ
ನಿನ್ನ ಪ್ರೀತಿಗೆ ನಾ ಶರಣಾದೆ...
ಹೆಸರಾದೆ ಹೆಸರಾದೆ ನನ್ನ
ಉಸಿರಿಗೆ ನಿ ಹೆಸರಾದೆ...

ಮನಸಾಗಿದೆ ಇಂದು ನಿನ್ನ ಕಂಡು ಚಂಚಲ...
ನಿನಗೂ ಆ ಖುಷಿಯ ಒಂಚೂರು ಹಂಚಲಾ...
ನಿನ್ನ ನಗುವ ಕಂಡು ನನಗಾಗಿದೆ ಗೊಂದಲ...
ನನ್ನ ಪ್ರೀತಿಯ ಒಪ್ಪಿಕೊ ನೀ ಒಂದ್ಸಲ...

ಶರಣಾದೆ ಶರಣಾದೆ
ನಿನ್ನ ಪ್ರೀತಿಗೆ ನಾ ಶರಣಾದೆ...
ಹೆಸರಾದೆ ಹೆಸರಾದೆ ನನ್ನ
ಉಸಿರಿಗೆ ನಿ ಹೆಸರಾದೆ...

ಮನದಲಿ ಸಂಚಲನ ಮೂಡಿಸಿದ ಮಿಂಚು ನೀನು...
ಸುಡು ಬಿಸಿಲಲ್ಲೂ ಕರಗದ ಮಂಜು ನೀನು...
ಎದೆಯಾಳದಿ ಮೂಡಿದ ಸಂಗೀತ ಸ್ವರ ನೀನು...
ನಿನ್ನಿ0ಗಿತ ಅರಿಯದೇ ಸೋತು ಬಳಲಿದೆ ನಾನು...

ಶರಣಾದೆ ಶರಣಾದೆ
ನಿನ್ನ ಪ್ರೀತಿಗೆ ನಾ ಶರಣಾದೆ...
ಹೆಸರಾದೆ ಹೆಸರಾದೆ ನನ್ನ
ಉಸಿರಿಗೆ ನಿ ಹೆಸರಾದೆ...

ಶುಕ್ರವಾರ, ಸೆಪ್ಟೆಂಬರ್ 16, 2011

ಮಾಘ ಮಾಸದ ತಣ್ಣನೆ ಚಳಿಯಿರಲು..
ಕೈಯಲ್ಲಿ ಬಿಸಿಬಿಸಿ ಕಾಫಿಯಿರಲು..
ಪಕ್ಕದಿ ಬೆಚ್ಚಗೆ ಮಡದಿಯಿರಲು..
ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...

ಮುಂಜಾನೆ ತಡವಾಗಿ ಎದ್ದು..
tv ಗೆ ಮುಖ ಮಾಡಿ ಕುಳಿತು..
ಮಡದಿ ಮಾಡಿದ ತಿಂಡಿಯ ತಿನ್ನಲು..
ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...

ನಸುನಗುತಾ ಮಡದಿ ಬೀಳ್ಕೊಡಲು..
ಮನಸ್ಸಿಲ್ಲದೇ duty ಗೆ ಹೊರಡಲು..
ಸಂಜೆ ಮಲ್ಲಿಗೆಯೊಂದಿಗೆ ಅವಳ ನೋಡಲು..
ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...

ವಾರಕ್ಕೊಂದು ಭಾನುವಾರ ಬರಲು..
ಮಧ್ಯಾಹ್ನದ ಅಡಿಗೆ ನಾನೇ ಮಾಡಲು..
ಸಂಜೆ ಯಾವ್ದಾದ್ರು ಸಿನೆಮಾಕ್ಕೆ ಹೋಗಲು..
ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...



ಮದುವೆಯಾಗಿ ವರುಷವಾಗಲು..
ಮನೆಯಲ್ಲೊಂದು ಪಾಪು ಬರಲು..
ನಮ್ಮಿಬ್ಬರಲ್ಲಿ ಹರುಷ ಮೂಡಲು..
ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...

ಪಾಪು ಗೆ ಐದು ವರಷವಾಗಲು..
ಸ್ಕೂಲ್ ಅಡ್ಮಿಷನ್ ಗಾಗಿ ಕಷ್ಟಪಡುತಿರಲು..
ಮನೆಯಲ್ಲಿ ಕರ್ಚುವೆಚ್ಚ ಬೆಳೆಯುತಿರಲು..
ಇಂತ ನಾಕ ಬೇಕಾ ಅಂದ ಪ್ರದೀಪ...

ಮನೆಯಲ್ಲಿ ಮಡದಿ ಸಿಡುಕುತಿರಲು..
ಆಫೀಸಲ್ಲಿ ಕೆಲಸ ಮರೆತಂತಾಗಲು..
Boss ಹತ್ರ ಉಗಿಸಿಕೊಳ್ಳಲು..
ಇಂತ ನಾಕ ಬೇಕಾ ಅಂದ ಪ್ರದೀಪ...

Bos ಮೇಲಿನ ಕೋಪವ ಮಡದಿ ಮೇಲೆ ತೋರಲು..
ಅವಳು ಬೇಸರದಿಂದ ಅಳುತ್ತಾ ಕೂರಲು..
ಕಷ್ಟವ ಮರೆಯಲು ಇವನು bar ಗೆ ಹೊರಡಲು..
ಇಂತ ನಾಕ ಬೇಕಾ ಅಂದ ಪ್ರದೀಪ...;

ಒಂದೇ ವರ್ಷಕ್ಕೆMarried life ಸಾಕೆನಿಸಲು..
ಮನೆ ಗೇ ಹೋಗೊಕೆ ಬೇಜಾರೆನಿಸಲು..
ಬೇರೊಂದು ಸಂಗಾತಿ ಬೇಕೆನಿಸಲು..
ಈ ನಾಕ ಬೇಡವೇ ಬೇಡವೆಂದ ಪ್ರದೀಪ..

ಮನ ಆಸೆ ಪಟ್ಟಂತೆ ಆಗಲು...
ಬೇರೊಬ್ಬ ಹೆಣ್ಣು ಸನಿಹಕ್ಕೆ ಬರಲು..
ಮನೆಯಲ್ಲಿ ಮರೆತ ಸಂತಸವ ಅವಳಲ್ಲಿ ಕಾಣಲು..
ಮತ್ತೆ ನಾಕಕ್ಕೆ ಕಿಚ್ಚು ಹಚ್ಚೆಂದ ಪ್ರದೀಪ...

To be continued....

ಬುಧವಾರ, ಸೆಪ್ಟೆಂಬರ್ 14, 2011

ಮನಸು ಜಾರುತಿದೆ
ಕನಸು ಕಾಡುತಿದೆ
ನಾನಿನ್ನ ಕಂಡಾಗಲೇ...
ಯಾಕೆ ಹೀಗಾಯ್ತೊ
ಎಲ್ಲಿ ಏನಾಯ್ತೊ
ನೀ ಸೇರು ನನ್ನೀಗಲೇ...
ಏನೂ ತೋಚದೇ ನಾನು
ಸೋತು ಹೋದೆನು ನಾನು
ನೀ ಒಮ್ಮೆ ನಕ್ಕಾಗಲೇ...
ನಿನ್ನ ನೊಟ ಸೆಳೆಯುತಿದೆ
ನಿನ್ನ ಮಾತು ಕೊಲ್ಲುತಿದೆ
ನೀ ಬಂದು ಸಂಭಾಳಿಸು...
ಏನೆ ಮಾಡಿದರೂ ಸರಿಯೇ
ಹೇಗೆ ಕಾಡಿದರೂ ಸರಿಯೇ
ನೀ ಒಮ್ಮೆ ನನ್ನ ಪ್ರೀತಿಸು...
ಏನು ಅರಿಯದ ನಾನು
ಒಬ್ಬ ದಡ್ಡನು ನಾನು
ನಿನ್ನ ಮೋಡಿಗೆ ಮರುಳಾದೆನಾ..?
ಈ ಪ್ರೀತಿ ಪಯಣದಲಿ
ಕವನ ಬರೆಯುತಲಿ
ನಾನೀಗ ಕವಿಯಾದೆನಾ..?